ಎತ್ತಿನಹೊಳೆ ಮೂಲಕ ಈ ಭಾಗಕ್ಕೆ ಅನುಕೂಲ

283

Get real time updates directly on you device, subscribe now.

ಕೊಡಿಗೇನಹಳ್ಳಿ: ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಆ ಗ್ರಾಮಗಳು ಸುಭೀಕ್ಷವಾಗಿ ಇರುತ್ತವೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಹೋಬಳಿಯ ಮೈದನಹಳ್ಳಿ ಗ್ರಾಮದ ಭೂತರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರದ ಭೂಮಿ ಪೂಜೆಯನ್ನು ಶಾಸಕ ಎಂ.ವಿ.ವೀರಭದ್ರಯ್ಯ ನೆರವೇರಿಸಿದರು. ನಂತರ ಮಾತನಾಡಿ, ಈ ಭಾಗವು ತೀವ್ರ ಹಿಂದುಳಿದ್ದು, ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು, ಎತ್ತಿನಹೊಳೆ ಕಾಮಗಾರಿ ಚಾಲನೆಯಲ್ಲಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಇದರಿಂದ ಈ ಭಾಗಕ್ಕೆ ಹೆಚ್ಚು ನೀರು ಹರಿಯಲಿದ್ದು ಉತ್ತಮ ಮಳೆ, ಬೆಳೆಯಾಗುವ ನಿರೀಕ್ಷೆಯಿದೆ ಎಂದರು.
ಸರಕಾರದಿಂದ ಅನುದಾನ ಸಿಗುತ್ತಿಲ್ಲ, ನನ್ನ 30 ವರ್ಷ ಸರಕಾರದ ಸೇವೆಯಲ್ಲಿ ಪರಿಚಿತರಾಗಿದ್ದ ಅಧಿಕಾರಿಗಳ ಮೂಲಕ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದು ಈ ಕೋವಿಡ್ ಕಾರಣ ಸರಕಾರಕ್ಕೆ ಸರಿಯಾಗಿ ಟ್ಯಾಕ್ಸ್ ಪಾವತಿಯಾಗುತ್ತಿಲ್ಲ, ಈ ಮಹಾಮಾರಿ ಕೊರೊನಾದಿಂದ ಪ್ರತಿಯೊಬ್ಬರು ಜಾಗೃತರಾಗಿಬೇಕು, ಆರೋಗ್ಯದ ವಿಚಾರದಲ್ಲಿ ತಾತ್ಸಾರ ಮನೋಭಾವ ಬೇಡ ಎಂದು ಸಲಹೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!