ಲಾರಿ ಡಿಕ್ಕಿ- ರೈತ ಸಾವು

49

Get real time updates directly on you device, subscribe now.


ಕುಣಿಗಲ್: ಸಂತೆಗಾಗಿ ತಾನು ಬೆಳೆದಿದ್ದ ಬೆಳೆ ಮಾರಲು ಬರುತ್ತಿದ್ದ ರೈತನಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರೈತ ಸ್ಥಳದಲ್ಲೆ ಮೃತಪಟ್ಟ ದಾರುಣ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಗವಿಮಠ ಬಳಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ.
ಮೃತ ರೈತನನ್ನು ಗವಿಮಠದ ವೆಂಕಟಪ್ಪ(51) ಎಂದು ಗುರುತಿಸಲಾಗಿದೆ, ಈತ ತಾನು ಬೆಳೆದ ಬದನೆ ಕಾಯಿ, ಬಾಳೆಕಾಯಿ ಗೊನೆಗಳನ್ನು ಬುಧವಾರ ಬೆಳಗಿನ ಜಾವ ಪಟ್ಟಣದ ಸಂತೆಯಲ್ಲಿ ಮಾರಲು ದ್ವಿಚಕ್ರ ವಾಹನದಲ್ಲಿ ಬರುವಾಗ ಹೆದ್ದಾರಿಯಲ್ಲಿ ಬಂದ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಅಪಘಾತದ ರಭಸಕ್ಕೆ ರೈತನ ಬೆಳೆಯು ಆತನ ಮೃತದೇಹದೊಂದಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪೊಲೀಸರು, ಸಾರ್ವಜನಿಕರು ಮರುಕ ಪಡುವಂತಾಯಿತು, ಘಟನೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!