ಕಲ್ಪತರು ವಿದ್ಯಾ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

107

Get real time updates directly on you device, subscribe now.

ತಿಪಟೂರು: ನಗರದ ಪ್ರತಿಷ್ಠಿತ ಕಲ್ಪತರು ವಿದ್ಯಾಸಂಸ್ಥೆ ಅಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ತಿಪ್ಪೇರುದ್ರಪ್ಪ ಖಚಾಂಚಿಯಾಗಿ, ಶಿವಪ್ರಸಾದ್ ಉಪಾಧ್ಯಕ್ಷರಾಗಿ ಎಸ್ ನಟರಾಜು, ಉಮೇಶ್ ಬೆಳ್ಳೊರು, ದೀಪಕ್, ಟಿ.ಎಸ್. ಬಸವರಾಜು, ಕಾರ್ಯದರ್ಶಿಗಳಾಗಿ ಮಾರನಗೆರೆ ಸಂಗಮೇಶ್, ಉಮಾಶಂಕರ್, ಜಗದೀಶ್, ಸುಧಾಕರ್ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ನಡೆಯಬೇಕಿದ್ದ ಚುನಾವಣೆ ಕೋವಿಡ್ ಕಾರಣಗಳಿಂದ ಮುಂದುಡಲ್ಪಟ್ಟಿತ್ತು. ಚುನಾವಣಾಧಿಕಾರಿಗಳ ನೀತಿ ನಿಯಮದಂತೆ ಏ.6 ರಂದು ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಠಾನಕ್ಕೆ 01 ಹುದ್ದೆ ಉಪಾಧ್ಯಕ್ಷ ಸ್ಠಾನಕ್ಕೆ 04, ಕಾರ್ಯದರ್ಶಿಸ್ಠಾನಕ್ಕೆ 04, ಖಚಾಂಚಿ ಸ್ಥಾನಕ್ಕೆ 01 ಒಟ್ಟು 10 ಸ್ಥಾನಕ್ಕೆ ಚುನಾವಣೆ ನಡೆದಿದೆ. ಮೇಲಿನ 10 ಸದಸ್ಯರು ಚುನಾಯಿತರಾಗಿದ್ದು ಹುದ್ದೆಗಳನ್ನು ಅಲಂಕರಿಸಿದ್ದಾರೆ. ತೀವ್ರ ಕೂತೂಹಲ ಕೆರಳಿಸಿದ್ದ ಖಚಾಂಚಿ ಹುದ್ದೆ ಬಾರಿ ಪೈಪೋಟಿ ನೆಡೆಸಿದ್ದ ಮಾಜಿ ಖಚಾಂಚಿ ಬಿ.ಆರ್. ವಿಶ್ವನಾಥ್ ಹಾಗೂ ಹಾಲಿ ಖಚಾಂಚಿಯಾಗಿದ್ದ ಟಿ.ಎಸ್. ಶಿವಪ್ರಸಾದ್ ನಡುವೆ ಪೈಪೋಟಿಯಲ್ಲಿ ವಿಶ್ವನಾಥ್ 139 ಮತ ಪಡೆದರೆ, ಶಿವಪ್ರಸಾದ್ 221 ಮತ ಪಡೆದು ಆಯ್ಕೆಯಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!