ಶಶಿಶೇಖರ ಸಿದ್ಧಬಸವಶ್ರೀಗಳ ಪೂರ್ವಾಶ್ರಮದ ಪಿತೃ ದುರ್ಮರಣ

136

Get real time updates directly on you device, subscribe now.


ತಿಪಟೂರು: ಬೂದಿಹಾಳ್ ಮಠದ ಶ್ರೀಶಶಿಶೇಖರಸಿದ್ಧ ಬಸವ ಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ರುದ್ರಾಪುರದ ಸಿದ್ದಯ್ಯಅವರು ದುರ್ಮರಣಕ್ಕೀಡಾಗಿದ್ದಾರೆ.
ತಾಲ್ಲೂಕಿನ ಗಡಿ ಭಾಗ ರುದ್ರಾಪುರ ಬಳಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ಬಳುವನೇರಲು ಗ್ರಾಮದ ಮರುಳಸಿದ್ದಪ್ಪ (65) ಸ್ಥಳದಲ್ಲಿ ಅಸುನೀಗಿದ್ದಾರೆ.
ಹಿಂಬದಿ ಸವಾರ ಸಿದ್ದಯ್ಯ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದೊಯ್ಯೂವಾಗ ಮಾರ್ಗ ಮಧ್ಯೆ ಗುಬ್ಬಿಯಲ್ಲಿ ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀಗಳು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ದಿನೇ ದಿನೇ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆ ದಿವ್ಯ ನಿರ್ಲಕ್ಷ್ಯವಹಿಸಿದೆ ಎಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರೂ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!