ಮುಸ್ಲಿಂ ಮಹಿಳೆ ಮೇಲೆ ಹಲ್ಲೆ

362

Get real time updates directly on you device, subscribe now.


ತಿಪಟೂರು: ನಗರದ ಮಖಾನ್ ಲೈನ್ ಖಾನ್ ಬಿಲ್ಡಿಂಗ್ ಮಾಲೀಕರಾದ ಗುಲ್ಜಾರ್ ಬಾನು ಎಂಬುವರ ಮೇಲೆ ಅಹಿಂದ ಮುಖಂಡ ಹಾಗೂ ಸಂಗೋಳಿರಾಯಣ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಪುರ ಲಿಂಗರಾಜು ಹಲ್ಲೇ ನಡೆಸಿರುವ ಘಟನೆ ನಡೆದಿದ್ದು ಈ ಬಗ್ಗೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮಖಾನ್ ಲೈನ್ ಖಾನ್ ಬಿಲ್ಡಿಂಗ್ ನಲ್ಲಿ ಬಾಡಿಗೆ ಪಡೆದ ಲಿಂಗರಾಜು.ಕ್ರಾಂತಿವೀರ ಸಂಗೋಳಿ ರಾಯಣ್ಣ ಪತ್ತಿನ ಸಹಕಾರ ಸಂಘವನ್ನ ನಡೆಸುತ್ತಿದ್ದರು ಆದರೇ ಕಳೆದ 2ವರ್ಷಗಳಿಂದ ಬಾಡಿಗೆ ನೀಡದ ಕಾರಣ ಬಾಡಿಗೆ ಕೇಳಲು ಹೋದ ಕಟ್ಟಡ ಮಾಲೀಕರ ಮೇಲೆ ಲಿಂಗರಾಜು ಮತ್ತು ಗುಂಪು ದಾಳಿನಡೆಸಿದ್ದು.ಗಲಾಟೆಯಲ್ಲಿ ಗುಲ್ಜಾರ್ ಬಾನು ಎಂಬುವವರಿಗೆ ತೀವ್ರವಾದ ಪೆಟ್ಟಾಗಿದ್ದು ಈ ಬಗ್ಗೆ ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!