ತಿಥಿ ಮುಗಿಸಿ ಬರುವಾಗ ಅಪಘಾತ: ಮಹಿಳೆ ಸಾವು

248

Get real time updates directly on you device, subscribe now.


ಕೊಡಿಗೇನಹಳ್ಳಿ: ಶ್ರಾದ್ಧ ಮುಗಿಸಿ ಹಿಂತಿರುಗಿ ಬರುವಾಗ ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಹೋಬಳಿಯ ಕೊಂಡವಾಡಿ ಬಳಿ ಕುರೂಡಿ ಗ್ರಾಮಕ್ಕೆ ತಿಥಿಗೆ ಹೋಗಿ ಬರುತಿದ್ದ ವೇಳೆ ದ್ವಿಚಕ್ರ ವಾಹನದ ಸವಾರನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಲಕ್ಷ್ಮಮ್ಮ ಬಿನ್ ಸಂಜೀವರಾಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು ಪುಟ್ಟನರಸಮ್ಮ ಬಿನ್ ಹನುಮಂತರಾಯಪ್ಪ, ಅಭಿಷೇಕ್ ಬಿನ್ ರಂಗಸ್ವಾಮಿ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಸ್ಥಳದಲ್ಲಿದ್ದವರು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತರು ಸೇರಿದಂತೆ ಇಬ್ಬರು ಗಾಯಾಳುಗಳು ಗೊಂದಿಹಳ್ಳಿ ಗ್ರಾಪಂ ಸಂಜೀವಪುರದ ನಿವಾಸಿ ಎಂದು ಗುರುತಿಸಲಾಗಿದೆ. ಮೃತ ಲಕ್ಷ್ಮಮ್ಮನ ದೇಹ ಮಧುಗಿರಿ ಶವಗಾರದಲ್ಲಿ ಇರಿಸಲಾಗಿದ್ದು ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!