ಸೋಮಜ್ಜನಪಾಳ್ಯದ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹ

287

Get real time updates directly on you device, subscribe now.

ಹುಳಿಯಾರು: ಹುಳಿಯಾರಿನ 11 ನೇ ವಾರ್ಡ್ಗೆ ಸೇರಿರುವ ಸೋಮಜ್ಜನಪಾಳ್ಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಪ.ಪಂ ಮುಖ್ಯಾಧಿಕಾರಿ ಗಮನಹರಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
ನೀರಿನ ಮೂಲ ಲಭ್ಯವಿದ್ದರೂ ಪೂರೈಕೆ ಸರಿಯಾಗಿ ಆಗುತ್ತಿಲ್ಲವಾದ್ದರಿಂದ ಸಮಸ್ಯೆಗೆ ಕಾರಣವಾಗಿದೆ, ಅಲ್ಲದೆ ನೀರಿನ ಸಿಸ್ಟನ್ಗಳಿಗೆ ಸರಿಯಾದ ನಲ್ಲಿ ವ್ಯವಸ್ಥೆ ಕೂಡ ಇಲ್ಲದೆ ರಾತ್ರಿ ಲೋಡ್ ಆದ ನೀರು ವ್ಯರ್ಥವಾಗಿ ಹರಿಯುತ್ತದೆ.
ಇದೀಗ ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನದ ಕೊರತೆ ಕಂಡು ಬರುವುದಿಲ್ಲ, ಆದರೂ ಪಟ್ಟಣ ಬಿಟ್ಟು ಹಳ್ಳಿ ಕಡೆ ಅಧಿಕಾರಿಗಳು ಬಾರದಿರುವುದರಿಂದ ಸಮಸ್ಯೆಯ ಅರಿವು ಆಗುತ್ತಿಲ್ಲ.
ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಿ ಸಮರ್ಪಕ ನೀರು ಪೂರೈಕೆಗೆ ಮುಂದಾಗುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!