ಪಿಡಿಓ ಸುದರ್ಶನ್ ಅಮಾನತು

156

Get real time updates directly on you device, subscribe now.


ಪಾವಗಡ: ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ವಳ್ಳೂರು ಗ್ರಾಮ ಪಂಚಾಯಿತಿ ಪಿಡಿಒ ಸುದರ್ಶನ್ ರನ್ನು ಅಮಾನತುಗೊಳಿಸಿ ತುಮಕೂರು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು.ಜಿ. ಆದೇಶ ಹೊರಡಿಸಿದ್ದಾರೆ

ಈ ಹಿಂದೆ ಸಿಕೆ ಪುರ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ 15ನೇ ಹಣಕಾಸು ಯೋಜನೆಯಡಿ 2022- 23ನೇ ಸಾಲಿನ ಇ-ಗ್ರಾಮ ಸ್ವರಾಜ್ ಪೋರ್ಟಲ್ ಕ್ರಿಯಾ ಯೋಜನೆಯ ಕ್ರಮ ಸಂಖ್ಯೆ:03ರ ಅಂಗವಿಕಲ ಕಲ್ಯಾಣ ನಿಧಿ ಅನುದಾನ ರೂ.1,69,470 ಮೀಸಲಿಟ್ಟಿದ್ದು, ನಿಯಮಾನುಸಾರ ವೆಚ್ಚ ಮಾಡದೇ ಮಾರ್ಗಪಲ್ಲಟ ಮಾಡಿ ಯೋಜನೆಯ ಮಾರ್ಗಸೂಚಿ ಉಲ್ಲಂಸಿ ಹಣ ದುರುಪಯೋಗ ಪಡಿಸಿಕೊಂಡಿರುವುದು, ಅದೇ ರೀತಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯಕ್ಕೆ 02 ಕಂಪ್ಯೂಟರ್ ಗೆ 79,000 ಹಣ ಮೀಸಲಿಟ್ಟಿದ್ದು, ತನಿಖೆಯ ವೇಳೆ ಭೌತಿಕವಾಗಿ ಕಂಪ್ಯೂಟರ್ ಗಳು ಇರುವುದಿಲ್ಲದ್ದನ್ನು ಕಂಡು ನಿಯಮಗಳನ್ನು ಉಲ್ಲಂಸಿದ್ದಾರೆ ಎಂದು ಸಲ್ಲಿಸಿದ್ದ ತನಿಖಾ ವರದಿ ಆದರಿಸಿ ಸುದರ್ಶನ್ ಅವರನ್ನು ಅಮಾನತು ಗೊಳಿಸಿ ಆದೇಶಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!