ಜಗಳ ವ್ಯಕ್ತಿ ಕೊಲೆಯಲ್ಲಿ ಅಂತ್ಯ

98

Get real time updates directly on you device, subscribe now.


ತುಮಕೂರು: ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ವ್ಯಕ್ತಿಯೊಬ್ಬ ಇನ್ನೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತುಮಕೂರು ತಾಲ್ಲೂಕು ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಬ್ಬೂರು ಹೋಬಳಿಯ ಕುಂಬಿಪಾಳ್ಯದಲ್ಲಿ ಘಟನೆ ನಡೆದಿದ್ದು ವಸಿಂ ಅಕ್ರಮ್ ಖಾನ್ ನನ್ನು ಕೊಲೆ ಮಾಡಲಾಗಿದೆ, ವಸೀಂ ಸ್ಕೂಟರ್ ಮೆಕಾನಿಕ್ ಆಗಿದ್ದ ಎಂದು ಹೇಳಲಾಗಿದೆ.

ವಸೀಂ ಮತ್ತು ಇಕ್ರಂ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಸೀಂ ನನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಲಾಗಿದೆ.
ಜಗಳದ ಸಂದರ್ಭದಲ್ಲಿ ವಸೀಂ ಲಾಂಗ್ ನಿಂದ ಇಕ್ರಂ ಮೇಲೆ ಹಲ್ಲೆ ನಡೆಸಿದನೆಂದು ಹೇಳಲಾಗಿದೆ, ಇದರಿಂದ ರೊಚ್ಚಿಗೆದ್ದ ಇಕ್ರಂ ಮರದ ತುಂಡಿನಿಂದ ತಲೆಗೆ ಬಲವಾಗಿ ಹೊಡೆದ ವೇಳೆ ವಸೀಂ ತಲೆಗೆ ತೀವ್ರ ಪಟ್ಟಾಗಿದೆ, ಕೂಡಲೇ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ವಸೀಂ ಮೃತಪಟ್ಟಿದ್ದಾನೆ, ಹೆಬ್ಬೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!