ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

100

Get real time updates directly on you device, subscribe now.

ಪಾವಗಡ: ಪಟ್ಟಣದ ಶನೈಶ್ಚರ ದೇಗುಲ ವೃತ್ತದ ಬಳಿ ಸೋಮವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ ಮಾಡಲಾಗಿದೆ, ಪಟ್ಟಣದ ಕುರುಬರ ಬೀದಿ ನಿವಾಸಿ ಶಂಕರಪ್ಪ (55) ಕೊಲೆಯಾದವರು.

ಪಟ್ಟಣದ ಬನಶಂಕರಿ ಬಡಾವಣೆ ಹಿಂಭಾಗದ ಗಂಗಮ್ಮ ದೇಗುಲದ ಬಳಿಯ ನಿವಾಸಿ ಅನಿಲ್ ಕೊಲೆ ಮಾಡಿದ ಆರೋಪಿ, ವೈ.ಎನ್.ಹೊಸಕೋಟೆಯ ಶಂಕರಪ್ಪ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು, ಪಡಿತರ ವಿತರಣಾ ಕೇಂದ್ರದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಆರೋಪಿ ಶನೈಶ್ಚರ ವೃತ್ತದ ಬಳಿಯ ಖಾಸಗಿ ಹೋಟೆಲ್ ಮುಂಭಾಗ ಆಹಾರ ಸೇವಿಸುತ್ತಿದ್ದಾಗ ಶಂಕರಪ್ಪ ಇಲ್ಲಿ ತಿನ್ನಬೇಡ ಪಕ್ಕಕ್ಕೆ ಹೋಗು ಎಂದು ಹೇಳಿದ್ದಾರೆ, ಇದರಿಂದ ಕುಪಿತಗೊಂಡ ಆರೋಪಿ ಕಟ್ಟಿಗೆ ತೆಗೆದುಕೊಂಡು ಶಂಕರಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿ ನೆರೆದಿದ್ದವರೂ ಜಗಳ ಬಿಡಿಸಲು ಹೋಗಿಲ್ಲ, ತೀವ್ರವಾಗಿ ಗಾಯಗೊಂಡಿದ್ದ ಶಂಕರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ, ಅನಿಲ್ 2016ರಲ್ಲಿ ತಂದೆಯನ್ನು ಕೊಲೆ ಮಾಡಿದ್ದು, ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ನೀಡಿತ್ತು, ಶಿಕ್ಷೆ ಪ್ರಮಾಣ ಕಡಿಮೆಯಾಗಿ ಆರೋಪಿ ಜೈಲಿನಿಂದ ಬಿಡುಗಡೆಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!