ಸಿದ್ಧಾರ್ಥ ವಿದ್ಯಾರ್ಥಿಗಳಿಂದ ಸ್ತನ ಕ್ಯಾನ್ಸರ್ ಜಾಗೃತಿ ಜಾಥಾ

111

Get real time updates directly on you device, subscribe now.


ತುಮಕೂರು: ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ರೋಗದ ಕುರಿತು ನಗರದಲ್ಲಿ ತುಮಕೂರು ವೈದ್ಯಕೀಯ ಸಂಘ ಹಾಗೂ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಟೌನಹಾಲ್ ಬಳಿ ವೈದ್ಯಕೀಯ ಸಂಘ ಮುಂಭಾಗ ಸ್ತನ ಕ್ಯಾನ್ಸರ್ ಜಾಗೃತಿ ಜಾಥಾಗೆ ಚಾಲನೆ ನೀಡಿದ ಸಾಹೇ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿಲಿಂಗೇಗೌಡ ಮಾತನಾಡಿ, ಮೊದಲ ಹಂತದಲ್ಲೇ ಕ್ಯಾನ್ಸರ್ ರೋಗದ ಗುಣ ಲಕ್ಷಣ ಪತ್ತೆ ಹಚ್ಚಿದರೆ ಚಿಕಿತ್ಸೆ ಮೂಲಕ ಪೂರ್ಣವಾಗಿ ರೋಗಿಯನ್ನು ಗುಣಪಡಿಸಲು ಸಾಧ್ಯವಿದೆ, ಸಮಾಜದಲ್ಲಿ ಶೇ.80% ಮಂದಿ ಕ್ಯಾನ್ಸರ್ರೋಗದಿಂದ ಬಳಲುತ್ತಿದ್ದಾರೆ, ಅದನ್ನು ಪ್ರಥಮ ಹಂತದಲ್ಲಿ ತಿಳಿದು ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು.

ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲ ಡಾ.ಪ್ರಭಾಕರ್ ಮಾತನಾಡಿ, ನಗರದ ಜನತೆಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಈ ದಿವಸವನ್ನು ಪಿಂಕ್ ಡೇ ಎಂದು ಆಚರಿಸುತ್ತಿದ್ದು, ಇದೇ 20 ರಂದು ಸ್ತನ ಕ್ಯಾನ್ಸರ್ ಬಗ್ಗೆ ವಿಜ್ಞಾನ ಅಧಿವೇಶನ ನಡೆಸುತ್ತಿದ್ದೇವೆ, ಅನೇಕ ತಜ್ಞ ವೈದ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಾಹೇ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಜೆಡ್.ಕುರಿಯನ್, ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ.ರಂಗಸ್ವಾಮಿ.ಹೆಚ್.ವಿ, ಕಾರ್ಯದರ್ಶಿ ಡಾ.ಮಹೇಶ್, ಕರ್ನಾಟಕ ಸ್ತ್ರೀ ರೋಗ ತಜ್ಞ ಸಂಸ್ಥೆ ಡಾ.ದುರ್ಗಾದಾಸ್ ಆಸ್ರನ್ನ, ಸ್ತ್ರೀ ರೋಗ ತಜ್ಞರಾದ ಡಾ.ಲಲಿತಾ.ಹೆಚ್, ಡಾ.ಜ್ಯೋತಿ ಸಿದ್ದಲಿಂಗೇಶ್ವರ, ಸಿದ್ದಾರ್ಥ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ತುಮಕೂರು ವೈದ್ಯಕೀಯ ಸಂಘದ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ನಗರದ ಟೌನ್ ಹಾಲ್ನಿಂದ ಆರಂಭಗೊಂಡ ಜಾಥಾ ಎಂ.ಜಿ.ರೋಡ್, ವಿವೇಕಾನಂದ ರೋಡ್ ಹಾಗೂ ಅಶೋಕ ರೋಡ್ ನಲ್ಲಿ ಸಂಚರಿಸಿ ಜನತೆಯಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿತು.

Get real time updates directly on you device, subscribe now.

Comments are closed.

error: Content is protected !!