ಮೀನು ಹಿಡಿಯಲು ಹೋದ ವ್ಯಕ್ತಿ ನಾಪತ್ತೆ

132

Get real time updates directly on you device, subscribe now.


ಕೊಡಿಗೇನಹಳ್ಳಿ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಡಗತ್ತೂರು ಗ್ರಾಮದ ಕೆರೆಯಲ್ಲಿ ನರಸಿಂಹಪ್ಪ (48) ಗುರವಾರ ಸಂಜೆ 4 ಗಂಟೆಗೆ ಮನೆಯಿಂದ ಮೀನು ಹಿಡಿಯಲು ಹೋಗುತ್ತೇನೆ ಎಂದು ತೆರಳಿದ್ದ, 24 ಗಂಟೆಯಾದರೂ ಮನೆ ಹಿಂತಿರುಗಿ ಬಂದಿರುವುದಿಲ್ಲ.
ಗಾಬರಿಗೊಂಡ ಕುಟುಂಬಸ್ಥರು ಶುಕ್ರವಾರ ಬೆಳಗ್ಗೆ ಹೋಗಿ ಕೆರೆಯಲ್ಲಿ ನೋಡಿದಾಗ ಕೆರೆಯ ದಡದಲ್ಲಿ ಬನಿಯನ್ ಮತ್ತು ಒಂದು ಷರ್ಟ್ ಹಾಗೂ ಮೀನು ಹಿಡಿಯುವ ಗಾಳ ಕಂಡು ಬಂದಿದ್ದು, ಎಲ್ಲೆಡೆ ಹುಡುಕಾಡಿದರೂ ವ್ಯಕ್ತಿ ಕಂಡು ಬಂದಿರುವುದಿಲ್ಲ.
ಕುಟುಂಬಸ್ಥರು ನೀರಲ್ಲಿ ಮುಳಗಿರುವ ಶಂಕೆ ವ್ಯಕ್ತಪಡಿಸಿದ್ದು ತಕ್ಷಣ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಅಗ್ನಿಶಾಮಕ ದಳದ ಆಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!