ಕಂದಾಚಾರ ಮುಂದುವರಿಸಿದರೆ ಕ್ರಮ

87

Get real time updates directly on you device, subscribe now.


ಗುಬ್ಬಿ: ತಾಲೂಕಿನ ಕಸಬಾ ಹೋಬಳಿಯ ಲಕ್ಕೇನಹಳ್ಳಿ ಗೊಲ್ಲರಹಟ್ಟಿಗೆ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಹುಂಡಿ ದಿಢೀರ್ ಭೇಟಿ ನೀಡಿದರು.

ಗ್ರಾಮದ ಹೊರಗಿನ ಗುಡಿಸಲಿನಲ್ಲಿ ಇಟ್ಟಿದ್ದ ಋತುಮತಿಯಾಗಿದ್ದ ಹೆಣ್ಣು ಮಕ್ಕಳನ್ನು ಮನೆಗೆ ಬಿಟ್ಟು ಗುಡಿಸಲನ್ನು ತೆರವುಗೊಳಿಸಿದ ನ್ಯಾಯಾಧೀಶರು ಗ್ರಾಮಸ್ಥರಿಗೆ ಹಾಗೂ ಹೆಣ್ಣು ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂತಹ ಆಧುನಿಕ ಕಾಲದಲ್ಲಿ ಸಹ ಇಂಥ ಕೆಟ್ಟ ಪದ್ಧತಿ ಆಚರಿಸುತ್ತಿರುವುದು ಸರಿಯಲ್ಲ, ಈಗಾಗಲೇ ಗುಬ್ಬಿ ತಾಲೂಕಿನ ಎಲ್ಲಾ ಗೊಲ್ಲರಹಟ್ಟಿಗಳಿಗೂ ನಾವೇ ಖುದ್ದು ತೆರಳಿ ಜಾಗೃತಿ ಮೂಡಿಸುತ್ತಿದ್ದರು ಮತ್ತೆ ಇಂತಹ ಕಂದಾಚಾರ ಮುಂದುವರಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿ ಗುಡಿಸಲನ್ನು ತೆರವು ಗೊಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಚಿದಾನಂದ, ಕಾರ್ಯದರ್ಶಿ ಸುರೇಶ್, ವಕೀಲರಾದ ಎಂ.ಪಿ.ರವೀಶ್, ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!