ಅಪಘಾತದಲ್ಲಿ ಬ್ಯಾಂಕ್ ಉದ್ಯೋಗಿ ದುರ್ಮರಣ

ಲಾರಿಗೆ ಡಿಕ್ಕಿ ಸಂಭವಿಸಿ ಸವಾರ ಸಾವು

599

Get real time updates directly on you device, subscribe now.

ತಿಪಟೂರು: ನಗರದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಪವನ್ (28) ಬಿಳಿಗೆರೆ ಗ್ರಾಮವಾಸಿ ತಡರಾತ್ರಿ 11 ಗಂಟೆಯಲ್ಲಿ ಕೆಎ 44 ಕ್ಯೂ 7789 ರಾಯಲ್ ಎನ್ಪಿಲ್‌ಡ್‌‌ನಲ್ಲಿ ಸಾಗುವಾಗ ಹುಚ್ಚಗೊಂಡನಹಳ್ಳಿ ಬಳಿ ಲಾರಿಗೆ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಅಲ್ಲಲ್ಲೇ ವಾಹನಗಳ ವೇಗ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ರಾತ್ರಿ ವೇಳೆ ಬೈಕ್ ಸವಾರನಿಗೆ ಬ್ಯಾರಿಕೇಡ್ ಕಾಣದೆ ರಬಸವಾಗಿ ನುಗ್ಗಿಸಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಅಸುನಿಗಿದ್ದಾನೆ. ಇದು ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಎಂದು ಸಾರ್ವಜನಿಕರು ದೂರಿದ್ದಾರೆ. ನಾಮಫಲಕ ಸರಿಯಾಗಿ ಅಳವಡಿಸದೇ ಇರುವುದೇ ಈ ದುರ್ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಭೇಟಿ ನೀಡಿ, ಪರಿಶೀಲಿಸಿದ್ದಾರೆ, ಈ ಸಂಬಂಧ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!