ಅಡಿಕೆ ಕಳ್ಳರ ಬಂಧನ

95

Get real time updates directly on you device, subscribe now.


ಕುಣಿಗಲ್: ತಾಲೂಕಿನ ವಿವಿಧೆಡೆಯಲ್ಲಿ ಅಡಿಕೆ ಕಳುವು ಮಾಡುತ್ತಿದ್ದ ದುಷ್ಕರ್ಮಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದು, ಪ್ರಕರಣದಕ್ಕೆ ಸಂಬಂಧಿಸಿದಂತೆ ನಗದು ಹಾಗೂ ವಾಹನ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಬೇಗೂರು ಹಾಗೂ ಹುಲಿಯೂರು ದುರ್ಗ ಹೋಬಳಿಯ ಕೆಂಪನಹಳ್ಳಿ ಗ್ರಾಮದ ವಿವಿಧೆಡೆಯಲ್ಲಿ ಅಡಿಕೆ ಕಳುವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ದೊರೆತ ಖಚಿತ ಮಾಹಿತಿ ಮೇರೆಗೆ ಕುಣಿಗಲ್ ಪೊಲೀಸರು ಮಂಡ್ಯ ಮೂಲದ ಅಭಿಷೇಕ, ಮಂಜುನಾಥ, ರವಿ, ಮನು ಹಾಗೂ ಅರ್ಜುನ್ ಎಂಬುವನ್ನು ಬಂಧಿಸಿ, ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಏಸ್ ವಾಹನ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಿಂಟರ್ ಕಳವು
ಪಟ್ಟಣ ತಾಲೂಕು ಪಂಚಾಯಿತಿ ಕಾರ್ಯಾಲಯದ ವಸತಿ ವಿಭಾಗದಲ್ಲಿನ ಪ್ರಿಂಟರ್ನ್ನು ದುಷ್ಕರ್ಮಿಗಳು ಕಳುವು ಮಾಡಿರುವ ಗಟನೆ ನಡೆದಿದೆ, ಕಚೇರಿಯಿ ಸ್ವಚ್ಛತಾಗಾರರು ಕಚೇರಿ ಸ್ವಚ್ಛತೆಯಲ್ಲಿ ತೊಡಗಿದ್ದು ಈ ವೇಳೆ ದುಷ್ಕರ್ಮಿಯೊಬ್ಬ ತನ್ನ ಕೈ ಚಳಕ ತೋರಿಸಿ ಪ್ರಿಂಟರ್ ಕಳವು ಮಾಡಿದ್ದಾನೆ, ಪ್ರಿಂಟರ್ ಕಳುವಾಗಿರುವ ಬಗ್ಗೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Get real time updates directly on you device, subscribe now.

Comments are closed.

error: Content is protected !!