ಪತ್ನಿ ಕೊಂದವನಿಗೆ ಶಿಕ್ಷೆ

86

Get real time updates directly on you device, subscribe now.


ಕುಣಿಗಲ್: ಕ್ಷುಲ್ಲಕ ಕಾರಣಕ್ಕೆ ಪತ್ನಿ ಕೊಲೆ ಮಾಡಿದ್ದ ಪತಿಗೆ ನ್ಯಾಯಾಲಯ ದಂಡ ಹಾಗೂ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಮೃತೂರು ಪೊಲೀಸ್ ವೃತ್ತದ ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಗರ ಪಾಳ್ಯ ಗ್ರಾಮದಲ್ಲಿ 2021ರ ಜುಲೈ 5 ರಂದು ಹನುಮಂತಯ್ಯ ಹಾಗೂ ಪತ್ನಿ ಲಕ್ಷ್ಮಮ್ಮ ಅ. ಜಯಲಕ್ಷ್ಮಮ್ಮ ಎಂಬುವರ ನಡುವೆ ಊಟದ ವಿಷಯವಾಗಿ ಜಗಳ ನಡೆದಿದ್ದು ಜಗಳದಲ್ಲಿ ಹನುಮಂತಯ್ಯ ಕಲ್ಲಿನಿಂದ ಪತ್ನಿಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಸಿಪಿಐ ಎಂ.ವಿ.ಗುರುಪ್ರಸಾದ್ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ತುಮಕೂರು 6ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ನಾಗೀರೆಡ್ಡಿ ಆರೋಪಿಗೆ ಐದು ಸಾವಿರ ರೂ. ದಂಡ ಹಾಗೂ ಕಠಿಣ ಜೀವಾವಧಿ ಸಜೆ ವಿಧಿಸಿದ್ದು ದಂಡ ಕಟ್ಟಲು ವಿಫಲವಾದರೆ ಒಂದು ವರ್ಷ ಕಠಿಣ ಸಜೆ ವಿಧಿಸಿ ಆದೇಶಸಿದ್ದಾರೆ, ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಆರ್.ಟಿ.ಅರುಣ ವಾದ ಮಂಡಿಸಿದ್ದರು.

Get real time updates directly on you device, subscribe now.

Comments are closed.

error: Content is protected !!