ಅಪಘಾತದಲ್ಲಿ ಪಾದಚಾರಿ ಸಾವು

98

Get real time updates directly on you device, subscribe now.


ಹುಳಿಯಾರು: ಪಾದಚಾರಿಗೆ ಬುಲೇರೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರಿನಲ್ಲಿ ನಡೆದಿದೆ.
ಹಾಲವಾಡಿ ಹೋಬಳಿಯ ಓಬಳಾಪುರ ಭೈರಪ್ಪ (68) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ, ಇವರು ಹುಳಿಯಾರಿನ ರಾಮಗೋಪಾಲ್ ಸರ್ಕಲ್ ನಿಂದ ಪೊಲೀಸ್ ಠಾಣೆಯ ಕಡೆ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಅರಸೀಕೆರೆಯ ಬುಲೇರೋ ಕಾರು ಡಿಕ್ಕಿ ಹೊಡೆದಿದೆ.
ಪರಿಣಾಮ ಭೈರಪ್ಪ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ, ಬುಲೇರೋ ವಾಹನ ವಶಪಡಿಸಿಕೊಂಡು ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!