ಫುಟ್ ಪಾತ್ ನಲ್ಲಿ ಇಟ್ಟಿದ್ದ ವಸ್ತುಗಳ ತೆರವು

73

Get real time updates directly on you device, subscribe now.


ತುಮಕೂರು: ನಗರದ ಮಂಡಿಪೇಟೆಗೆ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಭೇಟಿ ನೀಡಿ ಅಂಗಡಿಗಳ ಮುಂಭಾಗದ ಫುಟ್ ಪಾತ್ ನಲ್ಲಿ ಇಡಲಾಗಿದ್ದ ವಸ್ತುಗಳನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ಮಂಡಿಪೇಟೆ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳ ಮುಂಭಾಗದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟಿನ ಸಾಮಗ್ರಿ ಇಟ್ಟು ವ್ಯಾಪಾರ ವಹಿವಾಟು ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಆಯುಕ್ತೆ ಅಶ್ವಿಜಾ ಅವರು ಅಂಗಡಿಗಳ ಮುಂಭಾಗದ ಪಾದಚಾರಿ ರಸ್ತೆಯಲ್ಲಿ ಇಟ್ಟಿದ್ದ ಅಂಗಡಿಯ ಸಾಮಗ್ರಿಗಳನ್ನು ಖುದ್ದು ವೀಕ್ಷಿಸಿ ಕೂಡಲೇ ಫುಟ್ ಪಾತ್ ಮೇಲೆ ಇಡಲಾಗಿರುವ ವಸ್ತುಗಳನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಪಾಲಿಕೆಯ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಂಗಡಿಗಳ ಮುಂಭಾಗದಲ್ಲಿ ಫುಟ್ ಪಾತ್ ನಿರ್ಮಿಸಿರುವುದು ಪಾದಚಾರಿಗಳ ಸುಗಮ ಓಡಾಟಕ್ಕೆ, ಅಂಗಡಿಗಳ ಮುಂಭಾಗದಲ್ಲಿ ವಸ್ತುಗಳನ್ನು ಇಟ್ಟುಕೊಳ್ಳುತ್ತಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ, ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ, ಹಾಗಾಗಿ ಇನ್ನು
ಮುಂದೆ ಯಾವ ವರ್ತಕರು ಸಹ ಅಂಗಡಿಗಳ ಮುಂಭಾಗದ ಫುಟ್ ಪಾತ್ ಮೇಲೆ ಅಂಗಡಿಯ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ಮಾಡಬಾರದು ಎಂದು ತಿಳಿಸಿದರು.

ಅಂಗಡಿಗಳ ಮುಂಭಾಗಲ್ಲಿ ಶೀಟುಗಳನ್ನು ಫುಟ್ ಪಾತ್ ಗೆ ಸರಿ ಸಮಾನಾಗಿ ಚಾಚಿಕೊಳ್ಳುವಂತೆ ಹಾಕಿರುವುದು ಗಮನಕ್ಕೆ ಬಂದಿದೆ, ಇದು ಕೇವಲ ಮಂಡಿಪೇಟೆ ಮಾತ್ರವಲ್ಲ, ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಅಶೋಕ ರಸ್ತೆ, ಬಿ.ಹೆಚ್.ರಸ್ತೆ, ಎಸ್.ಎಸ್.ಪುರಂ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್ ಪಾತ್ ಒತ್ತುವರಿಯಾಗುತ್ತಿದೆ, ಕೂಡಲೇ ವರ್ತಕರು ಫುಟ್ ಪಾತ್ ಮೇಲೆ ಇಟ್ಟಿರುವ ವಸ್ತುಗಳನ್ನು ತೆರವುಗೊಳಿಸಿ ತಮ್ಮ ಅಂಗಡಿ ವ್ಯಾಪ್ತಿಯೊಳಗೆ ವ್ಯಾಪಾರ ಮಾಡಬೇಕು, ಇಲ್ಲದಿದ್ದರೆ ಪಾಲಿಕೆ ವತಿಯಿಂದ ತೆರವುಗೊಳಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!