ಹಣ, ಚಿನ್ನಾಭರಣ ಕಳವು

65

Get real time updates directly on you device, subscribe now.


ಕೊಡಿಗೇನಹಳ್ಳಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹೊರ ಭಾಗದಲ್ಲಿ ಇಡಲಾದ ಬೀಗ ತೆಗೆದು ಸುಮಾರು 11 ಲಕ್ಷ ನಗದು ಹಾಗೂ 60 ಗ್ರಾಪಂ ಚಿನ್ನ ದೋಚಿರುವ ಘಟನೆ ನಡೆದಿದೆ.
ಮಧುಗಿರಿ ತಾಲ್ಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿ ಸಿಂಗರಗೊಂಡನಹಳ್ಳಿ ಗ್ರಾಮದ ಫಕೃದ್ದೀನ್ ಎಂಬುವರ ಪತ್ನಿ ಕಿಡ್ನಿ ವೈಫಲ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆಂದು ಹಣ ಸಂಗ್ರಹ ಮಾಡಿದ್ದರು ಎನ್ನಲಾಗಿದೆ, ಕಿಡ್ನಿ ಶಸ್ತ್ರ ಚಿಕಿತ್ಸೆಗೆಂದು ಮೀಸಲಿಟ್ಟ ಹಣವನ್ನ ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಪತಿ ಫಕೃದ್ದೀನ್ ಜಮೀನಿನಲ್ಲಿ ಕೆಲಸಕ್ಕೆ ಹೋದ ಸಂದರ್ಭ ಗಮನಿಸಿ ಮನೆಯ ಪ್ರಮುಖ ಬಾಗಿಲಿನ ಕೀ ಪಕ್ಕದ ರೂಮಿನಲ್ಲಿ ಇಡುವುದನ್ನು ಗಮನಿಸಿ ಕಳ್ಳರು ತನ್ನ ಕೈಚಳಕವನ್ನು ತೋರಿದ್ದು, ಈ ಬಗ್ಗೆ ಕೊಡಿಗೇನಹಳ್ಳಿ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಪಿಎಸ್ ಐ ಶ್ರೀನಿವಾಸ್, ಎಎಸ್ ಐ ಖಾನ್, ಮುಖ್ಯಪೇದೆ ಜಯರಾಮ್ ಪೇದೆಗಳಾದ ಮಂಜುನಾಥ್, ನಾರಾಯಣ ಸ್ವಾಮಿ ಸ್ಥಳ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!