ಮನೆ ಮಾಲೀಕನಿಗೆ ಬೆದರಿಕೆ

83

Get real time updates directly on you device, subscribe now.


ಕುಣಿಗಲ್: ಕೆಲಸಕ್ಕೆಂದು ವಲಸೆ ಹೋಗಿದ್ದ ಕುಟುಂಬದವರು ಪುನಹ ಗ್ರಾಮಕ್ಕೆ ಮರಳಿ ಬಂದು ನೋಡಿದಾಗ ಅವರ ಮನೆಯನ್ನು ವ್ಯಕ್ತಿಯೊಬ್ಬ ಕೆಡವಿ ನಿರ್ಮಿಸಲು ಹೊರಟಿದ್ದು ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ನ್ಯಾಯಕ್ಕಾಗಿ ಬಾದಿತ ವ್ಯಕ್ತಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಾಲೂಕಿನ ಹುತ್ರಿದುರ್ಗ ಹೋಬಳಿಯ ವೈ.ಜಿ.ಪುರ ಗ್ರಾಮದಲ್ಲಿ ಶ್ರೀನಿವಾಸ್ ತಂದೆ ಮುನಿಯಪ್ಪ ಎಂಬುವರಿಗೆ 1992 ರಲ್ಲಿ ನಿವೇಶನ ನೀಡಲಾಗಿತ್ತು, ಅಂದಿನಿಂದ ಗ್ರಾಮದಲ್ಲಿ ಮನೆ ನಿರ್ಮಿಸಿಕೊಂಡಿದ್ದರು, ಕೆಲ ತಿಂಗಳ ಹಿಂದೆ ಕೂಲಿ ಸಿಗದ ಕಾರಣ ಕೂಲಿ ಕೆಲಸ ಅರಸಿಕೊಂಡು ಬೇರೆಡೆ ವಲಸೆ ಹೋಗಿದ್ದು, ಕಳೆದ ಗುರುವಾರ ಗ್ರಾಮಕ್ಕೆ ಬಂದಾಗ ಶ್ರೀನಿವಾಸ್ ಗೆ ಸೇರಿದ್ದ ಮನೆಯನ್ನು ಇದೆ ಗ್ರಾಮದ ವ್ಯಕ್ತಿಯೊಬ್ಬ ಕೆಡವಿ ಜಾಗ ತಮ್ಮದೆಂದು ಹೊಸಮನೆ ನಿರ್ಮಾಣಕ್ಕೆ ಮುಂದಾಗಿದ್ದ, ಇದನ್ನು ಪ್ರಶ್ನಿಸಲು ಹೋದ ಶ್ರೀನಿವಾಸ್ ಗೆ ಪ್ರಾಣ ಬೆದರಿಕೆ ಹಾಕಿದ್ದರಿಂದ ಶ್ರೀನಿವಾಸ್ ಪ್ರಾಣ ರಕ್ಷಣೆಗೆ ಹಾಗೂ ತನ್ನ ಸ್ವತ್ತಿಗೆ ಅತಿಕ್ರಮ ಪ್ರವೇಶ ಮಾಡಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!