ಅಪಘಾತ: ಮಹಿಳೆಗೆ ಗಾಯ

ಗಾಯಾಳುಗೆ ನೆರವಾದ ತಹಶೀಲ್ದಾರರು

181

Get real time updates directly on you device, subscribe now.


ಮಧುಗಿರಿ : ಅಪಘಾತಕ್ಕೆ ಒಳಗಾಗಿ ರಸ್ತೆ ಬದಿಯಲ್ಲಿದ್ದ ಮಹಿಳೆಯನ್ನು ಮಧುಗಿರಿ ತಹಸೀಲ್ದಾರ್ ಹಾಗೂ ಪಾವಗಡ ತಹಸೀಲ್ದಾರ್ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕೊರಟಗೆರೆಯ ಹೊರ ವರ್ತುಲ ರಸ್ತೆಯ ಸಮೀಪ ಈರುಳ್ಳಿಯನ್ನು ಹೊತ್ತು ಸಾಗುತ್ತಿದ್ದ ಲಗೇಜ್ ಆಟೋಗೆ ಹಿಂಬದಿಯಿಂದ ಬೊಲೋರೊ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ರಸ್ತೆಯ ಬದಿಯಲ್ಲಿ ಈರುಳ್ಳಿಯ ಮೂಟೆಗಳು ಬಿದ್ದಿದ್ದು ಆಟೋ ದಲ್ಲಿ ಕುಳಿತಿದ್ದ ಮಹಿಳೆಯು ರಸ್ತೆಯ ಪಕ್ಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು.
ತುಮಕೂರಿನಿಂದ ಮಧುಗಿರಿಗೆ ಮಾರ್ಗದಲ್ಲಿ ಬರುತ್ತಿದ್ದ ತಹಸೀಲ್ದಾರ್ ಸಿಗ್ಬತ್ ವುಲ್ಲಾ ಮತ್ತು ವರದರಾಜು ರವರು ಘಟನೆಯ ಬಗ್ಗೆ ತಿಳಿದು ಕೊಂಡು ಗಾಯವಾಗಿ ರಸ್ತೆ ಬದಿಯಲ್ಲಿದ್ದ ಮಹಿಳೆಯನ್ನು ಸಾರ್ವಜನಿಕ ಸಹಾಯದಿಂದ ತಮ್ಮ ವಾಹನದಲ್ಲಿಯೇ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ನೆರವಾದರು.ಇವರ ಈ ಕಾರ್ಯದಿಂದ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!