ಬಾವಿಗೆ ಬಿದ್ದು ಆಶಾ ಕಾರ್ಯಕರ್ತೆ ಸಾವು

141

Get real time updates directly on you device, subscribe now.


ಕೊಡಿಗೇನಹಳ್ಳಿ: ಎಮ್ಮೆ ಮೇಯಿಸುವ ವೇಳೆ ಮಹಿಳೆಯೊಬ್ಬಳು ಕಾಲು ಜಾರಿ ಬಾವಿಗೆ ಬಿದ್ದ ಮೃತಪಟ್ಟ ಘಟನೆ ನಡೆದಿದೆ.
ಮಧುಗಿರಿ ತಾಲ್ಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿ ಗಾಲಿಹಳ್ಳಿಯಲ್ಲಿ ಎಮ್ಮೆ ಮೇಯಿಸುತಿದ್ದಾಗ ದಾರವನ್ನು ಎಮ್ಮೆ ರಭಸವಾಗಿ ಎಳೆದಿದ್ದು ನಿಯಂತ್ರಣ ತಪ್ಪಿ ಮಹಿಳೆಯು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಮೃತಪಟ್ಟ ಮಹಿಳೆಯು ಗಾಲಿಹಳ್ಳಿಯ ಆಶಾ ಕಾರ್ಯಕರ್ತೆ ಸುನಂದಮ್ಮ(40) ಎಂದು ಗುರುತಿಸಿಲಾಗಿದೆ, ಮೃತರಿಗೆ ಪತಿ ತಿಮ್ಮರಾಜು ಸೇರಿದಂತೆ ಭರತ್ ಹಾಗೂ ವೆಂಕಟೇಶ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ, ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಸ್ಥಳಕ್ಕೆ ಕೊಡಿಗೇನಹಳ್ಳಿ ಪಿಎಸೈ ಶ್ರೀನಿವಾಸ್ ಪ್ರಸಾಸ್, ಪೇದೆಗಳಾದ ಜಯರಾಂ, ಮಂಜುನಾಥ್ ಭೇಟಿ ನೀಡಿ ಅಗ್ನಿಶಾಮಕ ಇಲಾಖೆಯ ಸಹಕಾರದಿಂದ ಶವ ಮೇಲೆತ್ತಿ ಮಧುಗಿರಿ ಶವಗಾರಕ್ಕೆ ರವಾನಿಸಿದ್ದಾರೆ, ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!