ಅಪಘಾತ ಪೊಲೀಸ್ ಸೇರಿ ಇಬ್ಬರ ಸಾವು

90

Get real time updates directly on you device, subscribe now.


ಕೊರಟಗೆರೆ: ಸ್ನೇಹಿತನ ಮದುವೆಯ ಆರಕ್ಷತೆ ಮುಗಿಸಿಕೊಂಡು ಮನೆಗೆ ಬರುವಾಗ ಅಪಾಯದ ರಸ್ತೆಯ ತಿರುವಿನಲ್ಲಿ ಚಾಲನೆ ವೇಳೆ ಆಯತಪ್ಪಿ ಅಪಘಾತ ನಡೆದು ಮುಖ್ಯ ಪೇದೆ ಸೇರಿ ಆತನ ಸ್ನೇಹಿತ ಸ್ಥಳದಲ್ಲೇ ಮೃತಪಟ್ಟರೇ ಮತ್ತೋರ್ವ ತುಮಕೂರು ಆದಿತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.


ಕೊರಟಗೆರೆ ತಾಲೂಕು ಚನ್ನರಾಯನ ದುರ್ಗ ಹೋಬಳಿ ಬೂದಗವಿ ಗ್ರಾಪಂ ವ್ಯಾಪ್ತಿಯ ಸಿದ್ದರಬೆಟ್ಟ- ತುಂಬಾಡಿ ಸಂಪರ್ಕದ ಅರಣ್ಯ ಇಲಾಖೆಯ ನರ್ಸರಿಯ ಸಮೀಪದ ರಸ್ತೆ ತಿರುವಿನಲ್ಲಿ ಅಪಘಾತ ನಡೆದಿದೆ, ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪೇದೆ ಮಹೇಶ್(27), ಮಧುಗಿರಿ ಮೂಲದ ಚಂದ್ರಯ್ಯ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮತ್ತೋರ್ವ ಭರತ್(22) ತೀವ್ರ ಗಾಯಗೊಂಡು ತುಮಕೂರಿನ ಆದಿತ್ಯಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಅವೈಜ್ಞಾನಿಕ ರಸ್ತೆಯಲ್ಲಿ ಈಗಾಗಲೇ ಹತ್ತಾರು ಅಪಘಾತ ನಡೆದಿವೆ, ಪಿಡ್ಲ್ಯೂಡಿ ಇಲಾಖೆ ದಿವ್ಯ ನಿರ್ಲಕ್ಷದಿಂದಲೇ ಈ ಸ್ಥಳದಲ್ಲಿ ಅಪಘಾತ ಸಂಖ್ಯೆಏರಿಕೆ ಆಗುತ್ತಿವೆ, ಕಳೆದ ವರ್ಷ ಮಧುಗಿರಿ ಎಸಿ ಪ್ರಯಾಣಿಸುವಾಗ ಅಪಘಾತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದನ್ನು ಸ್ಮರಿಸಬಹುದಾಗಿದೆ.
ಅಪಘಾತ ಸ್ಥಳಕ್ಕೆ ತುಮಕೂರು ಎಸ್ಪಿ ಕೆ.ವಿ.ಅಶೋಕ್, ಮಧುಗಿರಿ ಡಿವೈಎಸ್ಪಿ, ಕೊರಟಗೆರೆ ಸಿಪಿಐ ಅನಿಲ್, ಪಿಎಸೈ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!