ಅಪಘಾತದಲ್ಲಿ ಯುವಕ ಸಾವು

ಬೈಕ್ ಟ್ರ್ಯಾಕ್ಟರ್ ನಡುವ ಅಪಘಾತ

24

Get real time updates directly on you device, subscribe now.


ವೈ.ಎನ್.ಹೊಸಕೋಟೆ: ಭಾನುವಾರದಂದು ತಡರಾತ್ರಿ 7-35 ರ ಸಮಯದಲ್ಲಿ ದ್ವಿಚಕ್ರ ವಾಹನ ಮತ್ತು ಮರಳು ತುಂಬಿದ್ದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ರುದ್ರೇಶ್ (26) ಎಂಬ ಯುವಕ ಮೃತಪಟ್ಟಿದ್ದಾನೆ.
ಕಣದಿಂದ ತನ್ನ ಮನೆಗೆ ಗ್ರಾಮದ ಗರಡುಗಂಭ ರಸ್ತೆಯಲ್ಲಿ ರುದ್ರೇಶ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಬಂದ ಮರಳು ತುಂಬಿದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದೆ. ಕೂಡಲೆ ಗಾಯಾಳು ರುದ್ರೇಶನನ್ನು ಸ್ಥಳೀಯರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಟ್ರಾಕ್ಟರನ್ನು ಗ್ರಾಮದ ಕೆಜಿಬಿ ಬ್ಯಾಂಕಿನ ನೌಕರ ಆನಂದಕುಮಾರ್ ಚಲಾಯಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ಸಂಬಂಧ ಗ್ರಾಮದ ಪಿ ಎಸ್ ಐ ರಾಮಚಂದ್ರಪ್ಪ ಟ್ರ್ಯಾಕ್ಟರ್ ಡೈವರ್ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

Get real time updates directly on you device, subscribe now.

Comments are closed.

error: Content is protected !!