ಮಾನವನ ಅಸ್ತಿಪಂಜರ ಪತ್ತೆ

40

Get real time updates directly on you device, subscribe now.


ಕುಣಿಗಲ್: ತಾಲೂಕಿನ ಕಿತ್ತನಾಗ ಮಂಗಲ ಕೆರೆ ಸಮೀಪದಲ್ಲಿ ಮಾನವನ ಅಸ್ತಿಪಂಜರ ಪತ್ತೆಯಾಗಿದೆ, ದನ ಗಾಹಿಗಳು ದನ ಮೇಯಿಸಲು ಹೋದಾಗ ಅಸ್ತಿ ಪಂಜರ ಪತ್ತೆಯಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಕುಣಿಗಲ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ, ಅಸ್ತಿ ಪಂಜರದ ಸಮೀಪ ಕೈ ಬಳೆಗಳು ಪತ್ತೆಯಾಗಿವೆ, ಪೊಲೀಸರು ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆರು ತಿಂಗಳ ಕೆಳಗೆ ಕಾಣೆಯಾಗಿದ್ದ ಕಲ್ಲುಪಾಳ್ಯ ಗ್ರಾಮದ ರಂಜಿತ(22) ಎಂದು ಸಂಬಂಧಿಕರು ಮೇಲ್ನೋಟಕ್ಕೆ ಗುರ್ತಿಸಿದ್ದಾರೆ, ಖಚಿತತೆಗೆ ಎಫ್ ಎಸ್ ಎಲ್ ವರದಿ ನಂತರ ದೃಢಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ, ತಹಶೀಲ್ದಾರ್ ಹಾಗೂ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!