ಅಯ್ಯಪ್ಪ ಸ್ವಾಮಿಗೆ ವಿಶೇಷ ಪಡಿಪೂಜೆ

23

Get real time updates directly on you device, subscribe now.


ತುಮಕೂರು: ನಗರದ ಅಗ್ರಹಾರದ ತತ್ವಮಸಿ ಭಕ್ತ ಮಂಡಳಿಯಿಂದ ಇದೇ ಶುಕ್ರವಾರ (ಜ.5) ಅಗ್ರಹಾರ ಶಿಶುವಿಹಾರದ ಬಳಿ ನಿರ್ಮಿಸಿರುವ ವಿಶೇಷ ಮಂಟಪದಲ್ಲಿ ಶಬರಿಮಲೆ ಅರ್ಚಕ ಆನಂದ್ ನಂಬೂರಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪಡಿಪೂಜೆ ಹಾಗೂ ಹೆಸರಾಂತ ಗಾಯಕ ವೀರಮಣಿ ರಾಜು ಅವರ ಭಜನಾ ಕಾರ್ಯಕ್ರಮ ಏರ್ಪಾಟಾಗಿದೆ.

ಇದರ ಅಂಗವಾಗಿ ಬೆಳಗ್ಗೆ 5 ಗಂಟೆಗೆ ಗಣ ಹೋಮ, 5.30ಕ್ಕೆ ಶ್ರೀಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಅಲಂಕೃತ ವಿಶೇಷ ಮಂಟಪದಲ್ಲಿ ಪ್ರತಿಷ್ಠಾಪಿಸಿ ಶಾಸ್ತ್ರೋಕ್ತವಾಗಿ ಪೂಜೆ, ನೈವೇದ್ಯ ಸಲ್ಲಿಸಲಾಗುತ್ತದೆ, ಬೆಳಗ್ಗೆ 7.30ಕ್ಕೆ ಸ್ವಾಮಿಗೆ ಅಷ್ಟಾಭಿಷೇಕ 9ಕ್ಕೆ ಉಷಾ ಪೂಜೆ, 11ಕ್ಕೆ ಉಛ್ಚ ಪೂಜೆ, ಸಂಜೆ 4 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಅರ್ಪಿಸುವ ವಿವಿಧ ವಿಶೇಷ ಪುಷ್ಟಗಳ ಮೆರವಣಿಗೆ ನಂತರ ಸ್ವಾಮಿಗೆ ಪುಷ್ಪಾರ್ಚನೆ, ಸಂಜೆ 6 ಗಂಟೆಗೆ ದೀಪಾರಾಧನೆ ಕಾರ್ಯಕ್ರಮ ಇರುತ್ತದೆ.
ಸಂಜೆ 6.15ಕ್ಕೆ ಪವಿತ್ರ 18 ಮೆಟ್ಟಿಲುಗಳ ವಿಶೇಷ ಪಡಿಪೂಜೆ, ರಾತ್ರಿ 9ಕ್ಕೆ ಅತಳ ಪೂಜೆ ನಂತರ ಹರಿವರಾಸನಂ ಹಮ್ಮಿಕೊಳ್ಳಲಾಗಿದೆ, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ತತ್ವಮಸಿ ಭಕ್ತ ಮಂಡಳಿ ಕೋರಿದೆ.

Get real time updates directly on you device, subscribe now.

Comments are closed.

error: Content is protected !!