ಸಾಧಕಿ ಪೂಜಿತಗೆ ಚಿದಾನಂದ್ ಎಂ.ಗೌಡರಿಂದ ಅಭಿನಂದನೆ

166

Get real time updates directly on you device, subscribe now.

ಶಿರಾ: ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನ್ಯಾಷನಲ್ ಬಾಡಿ ಬಿಲ್ಡಿಂಗ್ ಚಾಂಪಿಯನ್ಷಿಪ್ನಲ್ಲಿ 17 ರಾಜ್ಯದ 124 ಸ್ಪರ್ಧಿಗಳ ಎದುರು ವುಮೆನ್ ಫಿಟ್ನೆಸ್ ಮಾಡೆಲ್ನಲ್ಲಿ ಪ್ರಥಮ ಸ್ಥಾನ ಮತ್ತು ವುಮೆನ್ ಫಿಜಿಕಲ್ ಮಾಡೆಲ್ನಲ್ಲಿ ತೃತೀಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟದ ಫಿಟ್ನೆಸ್ ಸ್ಪರ್ಧೆಗೆ ಆಯ್ಕೆಯಾಗಿರುವ ಶಿರಾ ತಾಲ್ಲೂಕಿನ ಕುಮಾರಿ ಪೂಜಿತ ಅವರಿಗೆ ಪ್ರೋತ್ಸಾಹ ಅಗತ್ಯ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ತಿಳಿಸಿದರು.
ನಗರದ ಸೇವಾ ಸದನಲ್ಲಿ ಕುಮಾರಿ ಪೂಜಿತ ಅವರಿಗೆ ಅಭಿನಂದನೆ ಸಲ್ಲಿಸಿ ರೂ. 10000 ಧನ ಸಹಾಯ ಮಾಡಿ ಮಾತನಾಡಿ, ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಮಾಟನಹಳ್ಳಿ ಗ್ರಾಮದ ರಂಗನಾಥ್ ಅವರ ಪುತ್ರಿ ಪೂಜಿತ ಅವರು ತಾಲ್ಲೂಕಿಗೆ ಹೆಮ್ಮೆ ಪಡುವಂತಹ ಕಾರ್ಯ ಮಾಡುತ್ತಿದ್ದಾರೆ, ಇವರು ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಇದಕ್ಕೆ ಅಂತಾರಾಷ್ಟ್ರೀಯ ತರಬೇತಿ ಪಡೆಯಬೇಕಾಗಿದೆ, ಇವರಿಗೆ ಹಣದ ಅವಶ್ಯಕತೆ ಇದ್ದು, ದಾನಿಗಳು, ಸಂಘ ಸಂಸ್ಥೆಗಳು ಇವರ ನೆರವಿಗೆ ಬಂದು ಗ್ರಾಮೀಣ ಪ್ರತಿಭೆಯು ಉತ್ತುಂಗಕ್ಕೇರಲು ಅವಕಾಶ ಮಾಡಿಕೊಡಬೇಕು ಎಂದರು. ಪೂಜಿತ ಅವರ ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 20152210002659, ಐ.ಎಫ್.ಎಸ್.ಸಿ ಕೋಟ್ ಎಸ್ವೈಎನ್ಬಿ 0002015, ಮೊ.6363185266 ಇವರ ಖಾತೆಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಪ್ರತಿಭೆ ಪ್ರೋತ್ಸಾಹಿಸಿ ಎಂದರು.
ಈ ಸಂದರ್ಭದಲ್ಲಿ ತರಬೇತುದಾರ ಮನೋಹರ್, ಮಾಜಿ ತಾಪಂ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!