ಆಟೋ ಚಾಲಕ ನಾಗಣ್ಣ ನಿಧನ

64

Get real time updates directly on you device, subscribe now.

ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ಹಾಗೂ ಕಂಭತ್ತನಹಳ್ಳಿ ವಿಎಸ್ಎಸ್ಎನ್ ನಿರ್ದೇಶಕ ಆರ್.ನಾಗರಾಜು ಅವರು ಸ್ವಗ್ರಾಮ ಕೈದಾಳದಲ್ಲಿ ನಿಧನರಾದರು.
ನಾಗರಾಜು ಅವರಿಗೆ 58 ವರ್ಷ ವಯಸ್ಸಾಗಿತ್ತು, ಶ್ರೀಯುತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಆಟೋ ಚಾಲಕರಾಗಿದ್ದ ನಾಗರಾಜು ಆಟೋ ಚಾಲಕರ ಸಮಸ್ಯೆಗಳ ನಿವಾರಣೆ ಸಂಬಂಧ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು, ಸದಾ ಹೋರಾಟದ ಮನೋಭಾವ ಹೊಂದಿದ್ದ ಇವರು ಆಟೋ ಚಾಲಕರ ಸಂಘದಲ್ಲೂ ಕಾರ್ಯ ನಿರ್ವಹಿಸಿದ್ದರು, ಇತ್ತೀಚೆಗಷ್ಟೆ ನಡೆದ ಕಂಭತ್ತನಹಳ್ಳಿ ವಿಎಸ್ಎಸ್ಎನ್ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕೈದಾಳದಲ್ಲಿ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!