ನೀರಿನ ಸಂಪಿಗೆ ಬಿದ್ದು ಮಗು ಸಾವು

74

Get real time updates directly on you device, subscribe now.


ಮಧುಗಿರಿ: ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಬ್ರಹ್ಮಸಂದ್ರ ಗ್ರಾಮದಲ್ಲಿ ಮನೆ ನಿರ್ಮಿಸುವ ಸಲುವಾಗಿ ನೀರಿನ ಸಂಪೊಂದನ್ನು ತೆಗೆಸಲಾಗಿದ್ದು, ಗ್ರಾಮದ ನಾಗರಾಜು ಅವರ ಪುತ್ರ ಋತ್ವಿಕ್ (4) ನೀರಿನ ಸಂಪಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದೆ.
ನೀರಿಗೆ ಬಿದ್ದಿದ್ದನ್ನು ಕಂಡ ಸ್ಥಳೀಯರು ಮಗುವನ್ನು ರಕ್ಷಿಸಿ ಪ್ರಥಮ ಚಿಕಿತ್ಸೆಗಾಗಿ ಹೊಸಕೆರೆಯ ಆಸ್ಪತ್ರೆಗೆ ಕರೆ ತಂದಿದ್ದಾರೆ, ಆದರೆ ಆ ಆಸ್ಪತ್ರೆಯಲ್ಲಿ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಇರಲಿಲ್ಲ, ಇನ್ನೂ ಜೀವವಿದ್ದ ಮಗುವನ್ನು ಕೆಶಿಫ್ ಆ್ಯಂಬುಲ್ನ್ಾಲ್ಲಿ ಮಧುಗಿರಿ ಆಸ್ಪತ್ರೆಗೆ ಕರೆ ತರಬೇಕಾದರೆ ಮಾರ್ಗ ಮಧ್ಯೆ ಮಗು ಆಸುನೀಗಿದೆ, ಹೊಸಕರೆ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಇರಲಿಲ್ಲವೆಂದು ಆರೋಪಿಸಿ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಟಿ ಹೆಚ್ ಓ ಕಚೇರಿ ಬಳಿ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!