ತಿಪಟೂರು: ಚಾಲಕನ ನಿಯಂತ್ರಣ ತಪ್ಪಿದ ಡೀಸೆಲ್ ಸಾಗಾಣೆ ಟ್ಯಾಂಕರ್ ಲಾರಿ ಉರುಳಿ ಬಿದ್ದು, ನೂರಾರು ಲೀಟರ್ ಡೀಸೆಲ್ ರಸ್ತೆ ಮೇಲೆ ಹರಿದಿರುವ ಘಟನೆ ಹಾಲ್ಕುರಿಕೆ ರಸ್ತೆ ಹರಿಸಮುದ್ರ ಗೇಟ್ ಬಳಿ ನಡೆದಿದೆ.
ಹಾಸನದಿಂದ ಹುಳಿಯಾರು ಕಡೆ ಚಲಿಸುತ್ತಿದ್ದ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಸವಾರರಿಗೆ ತೀವ್ರ ಪೆಟ್ಟಾಗಿದ್ದು, ಗಾಯಾಳುಗಳನ್ನುಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಸಮೀಪದ ಟ್ರಾನ್ಸ್ ಫಾರ್ಮ್ಗೆ ಡಿಕ್ಕಿ ಹೊಡೆದು ನಂತರ ಟ್ಯಾಂಕರ್ ಲಾರಿ ಪಲ್ಟಿಯಾಗಿ ರಸ್ತೆ ತುಂಬಾ ಇಂಧನ ಹರಿದಿದೆ, ಉರುಳಿದ ಟ್ಯಾಂಕರ್ನಿಂದ ಕೆಲ ಸ್ಥಳೀಯರು ಡೀಸೆಲ್ ತುಂಬಿಸಿಕೊಳ್ಳಲು ಯತ್ನಿಸಿದ್ದು ಸ್ಥಳಕ್ಕೆ ಬಂದ ಪೊಲೀಸರು ತಡೆದಿದ್ದಾರೆ.
ಟ್ಯಾಂಕರ್ ಲಾರಿ ಚಾಲಕ ಅತೀ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ, ಸ್ಥಳಕ್ಕೆ ಡಿವೈಎಸ್ ಪಿ ವಿನಾಯಕ ಶೆಟಗೇರಿ, ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮಾರ್ಗದ ರಸ್ತೆಯಲ್ಲಿ ಹತ್ತಾರು ತಿರುವುಗಳಿದ್ದು ಸಂಬಂಧಪಟ್ಟ ಇಲಾಖೆ ಯಾವುದೇ ಸೂಚನಾ ಫಲಕ ಅಳವಡಿಸಿಲ್ಲ, ರಸ್ತೆಗೆ ಹಂಪ್ಸ್ ಹಾಕಿಲ್ಲದೆ ಇರುವುದರಿಂದ ಅಪಘಾತ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
Comments are closed.