ಶಾಸಕ, ಸಂಸದರ ಬಗ್ಗೆ ಟೀಕೆ ಸಲ್ಲದು

42

Get real time updates directly on you device, subscribe now.


ಕುಣಿಗಲ್: ಕುದುರೆ ಫಾರಂ ಉಳಿಸಿ ಹೋರಾಟದ ನೆಪದಲ್ಲಿ ಶಾಸಕ, ಸಂಸದರ ಬಗ್ಗೆ ಟೀಕೆ ಮಾಡಿದ ವಿರೋಧ ಪಕ್ಷಗಳ ನಡೆಯನ್ನು ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ತೀವ್ರವಾಗಿ ಖಂಡಿಸಿದರು.
ಶುಕ್ರವಾರ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವಿರೋಧ ಪಕ್ಷ ನಾಯಕರಾದ ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಜೆಡಿಎಸ್ ಅಧ್ಯಕ್ಷ ಜಗದೀಶ್, ಶಾಸಕ, ಸಂಸದರ ಬಗ್ಗೆ ಲಘುವಾಗಿ ಮಾತನಾಡಿದ್ದು ಅಲ್ಲದೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ, ಕುದುರೆ ಫಾರಂ ಮಾರಾಟದ ಬಗ್ಗೆ ಸರ್ಕಾರದಲ್ಲಿ ಯಾವುದೇ ಪ್ರಸ್ತಾಪ ಇಲ್ಲ, ಇಂತಹ ಸಮಯದಲ್ಲಿ ಲೋಕಸಭೆ ಚುನಾವಣೆ ಮುಂದಿರುವಾಗ ಸಂಸದರಿಗೆ ಕೆಟ್ಟ ಹೆಸರು ತರಲು ಜನರನ್ನು ಎತ್ತಿಕಟ್ಟುವ ತಂತ್ರ ಖಂಡನೀಯ ಎಂದರು.

ಹಿಂದೆ ಬಿಜೆಪಿ ಸರ್ಕಾರದಲ್ಲಿನ ಸಚಿವ ಮಾಧುಸ್ವಾಮಿ ಅಭಿವೃದ್ಧಿ ನಿಟ್ಟಿನಲ್ಲಿ ಗುತ್ತಿಗೆ ನೀಡುವ ಬದಲು ಬೇರೆ ಕಾರ್ಯ ಕೈಗೆತ್ತಿ ಕೊಳ್ಳಲಾಗುವುದು ಎಂಬಂತೆ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ ಹೊರತು ಬೇರೇನು ಅಲ್ಲ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ, ಆದರೆ ಯಾರದೋ ತೇಜೋವಧೆಗೆ ಹೋರಾಟ ಮಾಡುವುದಿಲ್ಲ, ಸಂಸದರು, ಶಾಸಕರು ಕೈ ಕಾರ್ಯಕರ್ತರಿಗೆ ಒಂದು ಇತಿಮಿತಿಯಲ್ಲಿ ಇಟ್ಟಿದ್ದಾರೆ, ಆದರೆ ಅವರಿಗೆ ತೇಜೋವಧೆ ಮಾಡುವ ರೀತಿಯಲ್ಲಿ ಮಾತನಾಡಿದರೆ ನಮಗೂ ಮಾತನಾಡಲು ಬರುತ್ತದೆ, ಆಗ ಇವರ ಬಣ್ಣ ಬಯಲಾಗುತ್ತದೆ, ಕುದುರೆ ಫಾರಂ ವಿಷಯದಲ್ಲಿ ಇನ್ನು ಯಾವುದೇ ನಿರ್ಧಾರವಾಗದೆ ಇರುವಾಗ ಜನರಿಗೆ ಬಿಜೆಪಿ, ಜೆಡಿಎಸ್ ನವರು ಸುಳ್ಳು ಹೇಳಿ ಎತ್ತಿಕಟ್ಟುವ ಕೆಲಸ ಮಾಡಬಾರದು, ಇವರು ಹೀಗೆ ಮುಂದುವರೆದರೆ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಅಮೃತೂರು ಕಾಂಗ್ರೆಸ್ ಅಧ್ಯಕ್ಷ ಹರೀಶ್ ಮಾತನಾಡಿ, ಸಂಸದರು, ಶಾಸಕರ ಅಭಿವೃದ್ಧಿ ಕೆಲಸ ನೋಡಿ ಸಹಿಸಲಾರದೆ ಬಿಜೆಪಿ, ಜೆಡಿಎಸ್ನವರು ಇಂತಹ ಕುಚೋಧ್ಯದ ಕೆಲಸ ಮಾಡುತ್ತಿದ್ದಾರೆ, ಜವಾಬ್ದಾರಿ ವಿರೋಧ ಪಕ್ಷದ ರೀತಿ ಉತ್ತಮವಾಗಿ ನಡೆದುಕೊಳ್ಳಬೇಕು, ಇಲ್ಲವಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ವಕ್ತಾರ ಶಂಕರ್ ಮಾತನಾಡಿ, ಸಂಸದ, ಶಾಸಕರ ಕಾಲದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ವಿರೋಧ ಪಕ್ಷಗಳು ಇಂತಹ ವದಂತಿ ಹಬ್ಬಿಸಿ ಜನರನ್ನು ದಿಕ್ಕು ತಪ್ಪಿಸುತ್ತಿವೆ, ಇದು ಸರಿಯಲ್ಲ, ನಮಗೂ ಉತ್ತರ ನೀಡಲು ಬರುತ್ತದೆ ಎಂದು ಎಚ್ಚರಿಸಿದರು.
ಮುಖಂಡ ಹಾಲುವಾಗಿಲು ಸ್ವಾಮಿ ಮಾತನಾಡಿ, ಸಂಸದರ, ಶಾಸಕರ ಬಗ್ಗೆ ಏಕವಚನದಲ್ಲಿ ಮಾತನಾಡುವ ಬಿಜೆಪಿ, ಜೆಡಿಎಸ್ ಮುಖಂಡ ಸಂಸ್ಕೃತಿ ಏನೆಂದು ತೋರಿಸುತ್ತದೆ, ಇವರಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ ಜವಾಬ್ದಾರಿ ಅರಿತು ಮಾಡನಾಡಲಿ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್ ಶರೀಫ್, ಸದಸ್ಯ ಶ್ರೀನಿವಾಸ್, ಮುಖಂಡರಾದ ರಾಜಣ್ಣ, ಬೋರೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!