ಸಿಲಿಂಡರ್ ಸ್ಪೋಟ- ಗುಡಿಸಲು ಭಸ್ಮ

58

Get real time updates directly on you device, subscribe now.


ಪಾವಗಡ: ತಾಲೂಕಿನ ತುಮಕುಂಟೆ ಗ್ರಾಮದಲ್ಲಿ ಸಿಲಿಂಡರ್ ಸಿಡಿದು ಗುಡಿಸಲು ಮನೆ ಸಂಪೂರ್ಣ ಭಸ್ಮವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಶಿವಲಿಂಗಪ್ಪ ಕುಟುಂಬಸ್ಥರನ್ನು ಶುಕ್ರವಾರ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಭೇಟಿ ನೀಡಿ ಆರ್ಥಿಕ ನೆರವು ನೀಡಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ತುಮಕುಂಟೆ ಗ್ರಾಮದ ಶಿವಲಿಂಗಪ್ಪ ತನ್ನಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದ, ಕೆಲಸ ನಿಮಿತ್ತ ತೆರಳಿದ್ದ ವೇಳೆ ಭಾನುವಾರ ಮಧ್ಯಾಹ್ನ ಗುಡಿಸಲಿಗೆ ಬೆಂಕಿ ಬಿದ್ದು ಸಿಲಿಂಡರ್ ಸಿಡಿದು ಅಪಾರ ನಷ್ಟವಾಗಿತ್ತು, ಘಟನೆಯಲ್ಲಿ ದವಸ ಧಾನ್ಯ, ಗೃಹೋಪಯೋಗಿ ವಸ್ತುಗಳು ಭಸ್ಮವಾಗಿ ಕುಟುಂಬಕ್ಕೆ ನಷ್ಟವುಂಟಾಗಿರುವುದನ್ನು ತಿಳಿದು ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಎ.ಈರಣ್ಣ ನೇತೃತ್ವದಲ್ಲಿ ಮಾಜಿ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ, ಅರಸೀಕೆರೆ ಆನಂದ್, ಮನು, ಅಮರ್, ಕೊಡಿಗೆಹಳ್ಳಿ ಈರಣ್ಣ ಸೇರಿದಂತೆ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!