ವೃದ್ಧನ ಕಾಪಾಡಿದ ಪೊಲೀಸ್

66

Get real time updates directly on you device, subscribe now.


ಕೊರಟಗೆರೆ: ಕೌಟುಂಬಿಕ ಕಲಹದಿಂದ ಮನನೊಂದ ವೃದ್ಧನೋರ್ವ ತೀತಾ ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ನೀರಿನಲ್ಲಿ ಮುಳುಗುತ್ತಿದ್ದಾಗ ಪ್ರವಾಸಿ ಮಿತ್ರ ಪೊಲೀಸ್ ಜೂಲ್ ಫಕ್ರೋದ್ದಿನ್ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಸಮೀಪದ ತೀತಾ ಜಲಾಶಯದಲ್ಲಿ ದುರ್ಘಟನೆ ನಡೆದಿದೆ, ಗೊರವನಹಳ್ಳಿಯ ವಾಸಿಯಾದ ಚಿದಾನಂದ ಮೂರ್ತಿ (58) ಅಪಾಯದಿಂದ ಪಾರಾದ ವೃದ್ಧನಾಗಿದ್ದು ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ತೀತಾ ಜಲಾಶಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ಕಾಪಾಡಿದ ಪ್ರವಾಸಿ ಮಿತ್ರ ಪೊಲೀಸ್ ಜೂಲ್ ಫಕ್ರೋದ್ದಿನ್ ಅವರನ್ನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಸ್ಥಳಕ್ಕೆ ಕೋಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!