ದೇಗುಲದಲ್ಲಿ ಹುಂಡಿ ಕಳವು

27

Get real time updates directly on you device, subscribe now.


ಕುಣಿಗಲ್: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದ ಕೆಲವಾರು ತಿಂಗಳನಿಂದ ಕಡಿಮೆಯಾಗಿದ್ದ ದೇವಾಲಯಗಳಲ್ಲಿ ಕಳುವು ಪ್ರಕರಣ ಪುನಹ ಆರಂಭಗೊಂಡಿದ್ದು ಭಾನುವಾರ ರಾತ್ರಿ ದುಷ್ಕರ್ಮಿಗಳು ದೊಡ್ಡಕೆರೆಯ ಏರಿಯ ಮೇಲಿರುವ ಶ್ರೀವಿದ್ಯಾ ಗಣಪತಿ ಹಾಗೂ ಪದ್ಮೇಶ್ವರ ದೇವಾಲಯದ ಬಾಗಿಲು ಮುರಿದು ಬೆಳ್ಳಿತಟ್ಟೆ ಸೇರಿದಂತೆ ಹಿತ್ತಾಳೆಯ ದೀಪದ ಕಂಬ, ತೂಗು ದೀಪ ಸೇರಿದಂತೆ ಹುಂಡಿ ಕಳವು ಮಾಡಿದ್ದು ದೇವಾಲಯದ ಬಾಗಿಲು ಒಡೆಯಲು ಬಳಸಿರುವ ರಾಡ್ ಗಳನ್ನು ಅಲ್ಲಿಯೆ ಬಿಟ್ಟು ತೆರಳಿದ್ದಾರೆ.
ಸೋಮವಾರ ಬೆಳಗ್ಗೆ ವಾಯು ವಿಹಾರಕ್ಕೆ ಆಗಮಿಸಿದ ನಾಗರಿಕರು ನೋಡಿದ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ, ಘಟನೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದು ಅಂದಾಜು ಇಪ್ಪತ್ತೈದು ಸಾವಿರಕ್ಕೂ ಹೆಚ್ಚಿನ ಮೌಲ್ಯದ ವಸ್ತುಗಳು ಕಳುವಾಗಿದೆ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!