ಅಪ್ರಾಪ್ತ ಬಾಲಕಿ ಮೇಲೆ ಅತ್ಯಚಾರ- ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ

12

Get real time updates directly on you device, subscribe now.


ಕೊರಟಗೆರೆ: ಮನೆಯ ಮುಂದೆ ಸ್ನೇಹಿತೆಯರ ಜೊತೆ ಆಟ ಆಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಯುವಕನೋರ್ವ ಬಲವಂತವಾಗಿ ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿ ಪರಾರಿ ಆಗಿರುವ ಘಟನೆ ಜ.29ರ ಸೋಮವಾರ ಸಂಜೆ ನಡೆದಿತ್ತು.
ಕೊರಟಗೆರೆ ಪಟ್ಟಣದ 6 ವರ್ಷದ ಬಾಲಕಿ ತನ್ನ ಸ್ನೇಹಿತೆಯರ ಜೊತೆ ಮನೆಯ ಮುಂದೆ ಆಟ ಆಡುತ್ತಿದ್ದ ವೇಳೆ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೊರಗಡೆ ಹೊಂಚು ಹಾಕಿ ಯಾರು ಇಲ್ಲದಿರುವ ವೇಳೆ ಗಮನಿಸಿ ಬಾಲಕಿಯನ್ನು ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಅಸ್ವತ್ಥಗೊಂಡ ಬಾಲಕಿಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ, ಆರೋಪಿಗೆ ಕಠಿಣ ಮರಣದಂಡನೆ ನೀಡುವಂತೆ ಕೊರಟಗೆರೆ ಪಟ್ಟಣದ ಜನತೆ ಪೊಲೀಸ್ ಠಾಣೆ ಮುಂದೆ ದೌಡಾಯಿಸಿ ಆಗ್ರಹಿಸಿದ್ದಾರೆ.

ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಗ್ರಾಮದ ಲೇ.ರಾಮಲಿಂಗಪ್ಪನ ಮಗನಾದ ಪವನ್.ಆರ್ (23) ಬಂಧಿತ ಆರೋಪಿ, ಬಾಲಕಿಯ ಮೇಲೆ ಅತ್ಯಚಾರ ಎಸಗಿ ಪರಾರಿ ಆಗಿದ್ದ ಆರೋಪಿಯನ್ನ ತನ್ನ ಮನೆಯಲ್ಲಿ ಮಂಗಳವಾರ ಮುಂಜಾನೆಯೇ ಕೊರಟಗೆರೆ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿ ಕಂಡಿದೆ.
ಘಟನಾ ಸ್ಥಳಕ್ಕೆ ಕೊರಟಗೆರೆ ಸಿಪಿಐ ಅನಿಲ್, ಪಿಎಸೈ ಚೇತನ್, ಕೋಳಾಲ ಪಿಎಸೈ ರೇಣುಕಾ, ಸಿಡಿಪಿಓ ಅಂಬಿಕಾ, ಕಂದಾಯ ಇಲಾಖೆಯ ಗುರುಶಂಕರ್ ಮತ್ತು ನಕುಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಯುವಕನ ಮೇಲೆ ಪೋಕ್ಸೋ ಖಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರತಿಭಟಿಸಿ ತಹಶೀಲ್ದಾರ್ ಗೆ ಮನವಿ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಖಂಡಿಸಿ ಕೊರಟಗೆರೆ ಪಟ್ಟಣದ ಎ.ಪಿ.ಜೆ.ಅಬ್ದುಲ್ ಕಲಾಂ, ಎಸ್ಡಿಪಿಐ ಮತ್ತು ಸಾರ್ವಜನಿಕರು ಕಂದಾಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಮರಣ ದಂಡನೆ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು, ಪ್ರತಿಭಟನೆಯಲ್ಲಿ ನಯಾಜ್ ಅಹಮ್ಮದ್, ಅಲೀಂವುಲ್ಲಾ, ಶರೀಫ್, ಶಫೀವುಲ್ಲಾ ಖಾನ್, ಮಕ್ತಿಯಾರ್ ಅಹಮ್ಮದ್, ವಾಸಿಂ ಜಾಫರ್, ಸುರೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!