ಬೇವು ಮಿಶ್ರಿತ ಯೂರಿಯಾ ಸಾಗಾಟ- ಲಾರಿ ವಶ

23

Get real time updates directly on you device, subscribe now.


ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗದಲ್ಲಿ ಬೇವು ಮಿಶ್ರಿತ ಯೂರಿಯಾವನ್ನು ಯಾವುದೆ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಲಾರಿ ಹುಲಿಯೂರು ದುರ್ಗ ಪೊಲೀಸರು ವಶಕ್ಕೆ ಪಡೆದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ದಾಖಲೆ ಪರಿಶೀಲಿಸಿದ್ದು ಸದರಿ ಯುರಿಯಾ ಗೊಬ್ಬರ ರಾಜ್ಯದ ರೈತರಿಗೆ ವಿತರಣೆ ಮಾಡಲು ನೀಡಲಾಗಿದೆ.
ಲಾರಿಯಲ್ಲಿ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಾಣೆ ಮಾಡುತ್ತಿದ್ದು, ಅಕ್ರಮ ಸಾಗಾಣೆ ಮಾಡುತ್ತಿದ್ದಾರೆಂದು ದೂರು ನೀಡಿದ್ದರ ಮೇರೆಗೆ ಪೊಲೀಸರು 605 ಚೀಲ ಗೊಬ್ಬರ, 16.75 ಲಕ್ಷ ರೂ. ಮೌಲ್ಯದ ರಸಗೊಬ್ಬರ, ಲಾರಿ, ಚಾಲಕನನ್ನು ವಶಕ್ಕೆ ಪಡೆದ ಹುಲಿಯೂರು ದುರ್ಗ ಪಿಎಸೈ ಜಯಕುಮಾರ್ ಪ್ರಕರಣ ದಾಖಲಿಸಿದ್ದಾರೆ, ಕೃಷಿ ಅಧಿಕಾರಿ ಬಸವರಾಜ ಕುಮಾರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!