ವಾಹನಗಳು ಹರಿದು ವ್ಯಕ್ತಿ ದೇಹ ಛಿದ್ರ

25

Get real time updates directly on you device, subscribe now.


ಕುಣಿಗಲ್: ಅಪರಿಚಿತ ವಾಹನಗಳು ವ್ಯಕ್ತಿಯ ಮೇಲೆ ಹರಿದು ಇಡೀ ದೇಹ ಛಿದ್ರಗೊಂಡಿರುವ ಘಟನೆ ಪಟ್ಟಣದ ರಾಜ್ಯ ಹೆದ್ದಾರಿಯ 33ರ ಗ್ರಾಮ ದೇವತೆ ಸರ್ಕಲ್ ಬಳಿ ಶನಿವಾರ ಬೆಳಗಿನ ಜಾವ ನಡೆದಿದ್ದು, ನಾಗರಿಕರ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ, ಕ್ರಮ ಕೈಗೊಂಡಿದ್ದಾರೆ.
ರಾಜ್ಯ ಹೆದ್ದಾರಿ 33ರ ಗ್ರಾಮದೇವತೆ ಸರ್ಕಲ್ ಸಮೀಪದ ತುಮಕೂರು ರಸ್ತೆಯ ವೈನ್ ಸ್ಟೋರ್ ಸಮೀಪದಲ್ಲಿ ವ್ಯಕ್ತಿಯೊಬ್ಬ ತಲೆ ಮಾತ್ರ ಕಾಣಿಸುತ್ತಿದ್ದು ಉಳಿದ ದೇಹ ಅಪರಿಚಿತ ವಾಹನಗಳು ಹರಿದಾಡಿರುವುದರಿಂದ ದೇಹ ಛಿದ್ರಗೊಂಡಿತ್ತು, ಬೆಳಗ್ಗೆ ಮಾರುಕಟ್ಟೆಗೆ ಆಗಮಿಸಿದ ನಾಗರಿಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಮೃತ ದೇಹ ತೆರವುಗೊಳಿಸಿದ್ದು, ಮೃತನನ್ನು ಕೊತ್ತಗೆರೆ ಹೋಬಳಿಯ ಹೊನ್ನೆನಹಳ್ಳಿ ಗ್ರಾಮದ ರಂಗೇಗೌಡ (55) ಎಂದು ಗುರುತಿಸಲಾಗಿದ್ದು ಈತ ಮದ್ಯ ವ್ಯಸನಿಯಾಗಿದ್ದು ಗ್ರಾಮದಿಂದ ಹೊರ ಬಂದಿದ್ದ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!