ಗೋಮಾಂಸ ಸಾಗಾಣೆ ವಾಹನ ವಶ

29

Get real time updates directly on you device, subscribe now.


ಕುಣಿಗಲ್: ಪಟ್ಟಣದ ಹೊರವಲಯದಲ್ಲಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಗೋಮಾಂಸ ಸಾಗಾಣೆ ವಾಹನ ಪತ್ತೆ ಹಚ್ಚಿದ ಸ್ವಯಂ ಸೇವಾ ಸಂಸ್ಥೆಯವರು ವಾಹನ, ಜಾನುವಾರು ಮಾಂಸವನ್ನು ಪೊಲೀಸರ ವಶಕ್ಕೆ ನೀಡಿರುವ ಘಟನೆ ನಡೆದಿದೆ.
ಅನಿಮಲ್ ವೆಲ್ಫೇರ್ ಬೋರ್ಡ್ ಅಫ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯ ಗಿರೀಶ್ ಎಂಬುವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗವಿಮಠ ಬ್ರಿಡ್ಜ್ ಸಮೀಪ ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಿ, ಸರಕು ಸಾಗಾಣೆ ವಾಹನ ತಡೆದು ಪರಿಶೀಲಿಸಿದಾಗ ಗೋಮಾಂಸ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಾಹನ, ಗೋಮಾಂಸ ಪೊಲೀಸರ ವಶಕ್ಕೆ ನೀಡಿ ಅಕ್ರಮ ಗೋಮಾಂಸ ಸಾಗಾಣೆ ಮಾಡುತ್ತಿದ್ದ ವಾಹನ ಚಾಲಕ ಚನ್ನರಾಯಪಟ್ಟಣ ತಾಲೂಕಿನ ಅಸೀಫ್, ಅಬ್ದುಲ್ ಹಕ್ ಅವರ ಮೇಲೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!