ಹಣ್ಣು ಹಂಚಿ ಬಿಎಸ್ವೈ ಹುಟ್ಟುಹಬ್ಬ ಆಚರಣೆ

10

Get real time updates directly on you device, subscribe now.


ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 81ನೇ ಹುಟ್ಟು ಹಬ್ಬವನ್ನು ತುಮಕೂರಿನಲ್ಲಿ ಅವರ ಅಭಿಮಾನಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಆಚರಿಸಿ ಸಂಭ್ರಮಿಸಿದರು.

ಬಿಜೆಪಿ ಮುಖಂಡರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ತಮ್ಮ ನಾಯಕನ ಜನ್ಮದಿನವನ್ನು ಸ್ಮರಣೀಯವಾಗಿ ಆಚರಣೆ ಮಾಡಿದರು.
ಈ ವೇಳೆ ಜಿಲ್ಲಾ ಬಿಜೆಪಿ ಮಾಧ್ಯಮ ಸಂಯೋಜಕ ಟಿ.ಆರ್.ಸದಾಶಿವಯ್ಯ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಸಂಘಟಿಸಿ ಅಧಿಕಾರಕ್ಕೆ ತರಲು ಯಡಿಯೂರಪ್ಪನವರು ಪ್ರಮುಖ ಪಾತ್ರ ವಹಿಸಿದರು, ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಜನಪ್ರಿಯ ನಾಯಕ ಯಡಿಯೂರಪ್ಪ ಅವರು ಪಕ್ಷದ ಕಾರ್ಯಕರ್ತರಿಗೆ ಶಕ್ತಿಯಾಗಿದ್ದಾರೆ, ಯಡಿಯೂರಪ್ಪನವರಿಗೆ ಆರೋಗ್ಯ ವೃದ್ಧಿಯಾಗಿ, ಮತ್ತಷ್ಟು ಅಧಿಕಾರ ದೊರೆಯಲಿ ಎಂದು ಆಶಿಸಿದರು.

ಈ ವೇಳೆ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ವೀಣಾ, ಬಿಜೆಪಿ ಮುಖಂಡರಾದ ರಂಗಾನಾಯ್ಕ, ಕೆ.ವೇದಮೂರ್ತಿ, ವಕ್ತಾರ ಜಗದೀಶ್, ಸತ್ಯಮಂಗಲ ಜಗದೀಶ್, ಗಂಗೇಶ್, ನಾಗೇಂದ್ರ, ಚೆಂಗಾವಿ ರವಿ, ಎಂ.ಗೋಪಿ, ಡಾ.ಫರ್ಜಾನಾ ರಹೀಂಜಿ, ಕೋಮಲಾ, ರಾಜ್ ಕುಮಾರ್, ಅರುಣ್ ಕುಮಾರ್, ನಿಸರ್ಗ ರಮೇಶ್, ಜ್ಯೋತಿ ತಿಪ್ಪೇಸ್ವಾಮಿ, ಪ್ರಕಾಶ್, ರಾಮಣ್ಣ, ದಾನೇಶ್ವರಿ, ರಾಧಾ, ಕಾವ್ಯ ಮೊದಲಾದವರು ಹಾಜರಿದ್ದು, ಯಡಿಯೂಪ್ಪನವರಿಗೆ ಶುಭ ಕೋರಿದರು.

Get real time updates directly on you device, subscribe now.

Comments are closed.

error: Content is protected !!