ರೇಣುಕ ಪ್ರಸಾದ್ ಗೆ ಮಾತೃ ವಿಯೋಗ

15

Get real time updates directly on you device, subscribe now.


ತುಮಕೂರು: ಪತ್ರಿಕಾ ಛಾಯಾಗ್ರಾಹಕ ಟಿ.ಎಸ್.ರೇಣುಕಾ ಪ್ರಸಾದ್ ಅವರ ತಾಯಿ ಗಂಗಮ್ಮ (87) ನಿಧರಾದರು.
ಆರ್.ಟಿ. ನಗರದ ಹೋರಿ ಮುದ್ದಪ್ಪ ಬಡಾವಣೆಯ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ಗಂಗಮ್ಮ ಅವರು ನಿಧನರಾಗಿದ್ದು, ಪುತ್ರರಾದ ರೇಣುಕ ಪ್ರಸಾದ್, ಮಂಜುನಾಥ್, ಧರ್ಮ ಪ್ರಕಾಶ್, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಪಾರ್ಥೀವ ಶರೀರವನ್ನು ಹೋರಿ ಮುದ್ದಪ್ಪ ಬಡಾವಣೆಯ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು, ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್ ಸೇರಿದಂತೆ ಪತ್ರಕರ್ತರು ಮೃತರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಶನಿವಾರ ಮಧ್ಯಾಹ್ನ ನಗರದ ಕುಣಿಗಲ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!