ಬಳ್ಳಾಪುರ ಪಂಪ್ ಹೌಸ್ ಗೆ ಜಿಲ್ಲಾಧಿಕಾರಿ ಭೇಟಿ

22

Get real time updates directly on you device, subscribe now.


ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತುಮಕೂರು ತಾಲೂಕು ಬೆಳ್ಳಾವಿ ರಸ್ತೆ ಬಳ್ಳಾಪುರ (ರಂಗಯ್ಯನ ಪಾಳ್ಯ) ಕುಡಿಯುವ ನೀರಿನ ಪಂಪ್ ಹೌಸ್ ಗೆ ಭೇಟಿ ನೀಡಿ ಪರಿಶೀಲಿಸಿದರು.
ಶೀಘ್ರದಲ್ಲೇ ಹೇಮಾವತಿ ನಾಲೆ ನೀರು ಬರುವ ನಿರೀಕ್ಷೆ ಇರುವುದರಿಂದ ಬಳ್ಳಾಪುರ ಪಂಪ್ ಹೌಸ್ ನಿಂದ 54 ಕಿ.ಮೀ ಅಂತರದ ಮಧುಗಿರಿ ತಾಲೂಕು ಸಿದ್ಧಾಪುರ ಕೆರೆ ಹಾಗೂ 24 ಕಿ.ಮೀ ಅಂತರದ ಕೊರಟಗೆರೆ ತಾಲೂಕು ಅಗ್ರಹಾರ ಕೆರೆಗೆ ನೀರು ಸರಬರಾಜು ಮಾಡುವ ಮಾರ್ಗ ಪರಿಶೀಲನೆ ಮಾಡಿದರು.
ನಂತರ ಮಾತನಾಡಿದ ಅವರು, ಹೇಮಾವತಿ ನೀರನ್ನು ಯಾವುದೇ ಸಮಯದಲ್ಲಿ ನಾಲೆಗೆ ಬಿಡುವ ನಿರೀಕ್ಷೆ ಇದ್ದು, ನಾಲೆಯ ಸುತ್ತ ಮುತ್ತ ಓಡಾಡದಂತೆ ಹಾಗೂ ಜಾನುವಾರುಗಳನ್ನು ನಾಲೆಯ ಬಳಿ ಕರೆದೊಯ್ಯದಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ ಅವರು ಪಂಪ್ ಹೌಸ್ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ವಿದ್ಯುತ್ ಇಂಜಿನಿಯರ್ ಸಂದೀಪ್, ಮಧುಗಿರಿ ಹಾಗೂ ಕೊರಟಗೆರೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!