ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಸೋಮಣ್ಣ

17

Get real time updates directly on you device, subscribe now.


ತುಮಕೂರು: ಮಾಜಿ ಸಚಿವ ವಿ.ಸೋಮಣ್ಣ ಅವರು ತುಮಕೂರು ನಗರದ ಸರಸ್ವತಿಪುರಂನ ಕಾರ್ಯಕರ್ತರ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಈ ಬಾರಿಯ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನನಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದರೆ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ, ನರೇಂದ್ರ ಮೋದಿಯವರು 2014 ರಿಂದ ಪ್ರಧಾನಿಯಾದ ಮೇಲೆ ಭ್ರಷ್ಟಾಚಾರಕ್ಕೆ ಅವಕಾಶವಾಗಿಲ್ಲ, ದೇಶದ ಅಭಿವೃದ್ಧಿಯೇ ಮೋದಿಯವರ ಮಂತ್ರವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಪಾಲಿಕೆ ಸದಸ್ಯರಾದ ಎಂ.ಪಿ.ರಮೇಶ್, ಮಲ್ಲಿಕಾರ್ಜುನ್, ಇಂದ್ರಕುಮಾರ್, ಪುಟ್ಟರಾಜು, ಮುಖಂಡರಾದ ಶಂಕರ್ ಕುರಿಪಾಳ್ಯ, ಸತ್ಯಮಂಗಲ ಜಗದೀಶ್, ಕಬಡ್ಡಿ ರವಿ, ಲಕ್ಷ್ಮೀನಾರಾಯಣ, ಪ್ರಧಾನ್ ಕುಮಾರಣ್ಣ, ಹೆಚ್.ಎಂ.ಎಸ್.ಕುಮಾರ್, ಶರತ್ ಮೆಳೇಕೋಟೆ, ಅರವಿಂದ್ ಕ್ಯಾತಸಂದ್ರ, ದೊಡ್ಡಯ್ಯ, ಕೃಷ್ಣಪ್ಪ ಹಾಗೂ ಮುಂತಾದ ಮುಖಂಡರು, ಕಾರ್ಯಕರ್ತರು ಇದ್ದರು.

Get real time updates directly on you device, subscribe now.

Comments are closed.

error: Content is protected !!