ವಿ.ಸೋಮಣ್ಣ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ತಾರೆ

14

Get real time updates directly on you device, subscribe now.


ತುಮಕೂರು: ಬಿಜೆಪಿ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದೆ, ಇದನ್ನು ಸ್ವಾಗತಿಸಬೇಕೆ ಹೊರತು ಇದನ್ನು ವಿರೋಧ ಮಾಡುತ್ತಾ ಹಾದಿ ಬೀದಿಲಿ ಪಕ್ಷದ ಬಗ್ಗೆ ಮತ್ತು ಅಭ್ಯರ್ಥಿ ಬಗ್ಗೆ ಮಾತನಾಡಿ ಪಕ್ಷಕ್ಕೆ ಮುಜುಗರ ಮಾಡುವವರು ಎಷ್ಟೇ ದೊಡ್ಡವರಿರಲಿ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗಿವುದು ಎಂದು ಶಾಸಕ ಬಿ.ಸುರೇಶ ಗೌಡ ತಿಳಿಸಿದರು.
ತುಮಕೂರಿನ ಪಕ್ಷದ ಚುನಾವಣಾ ಕಾರ್ಯಾಲಯದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ನೂರಕ್ಕೆ ನೂರು ತುಮಕೂರಿನಲ್ಲಿ ದೇಶಕ್ಕಾಗಿ ಹಾಗೂ ಮೋದಿಗಾಗಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದೇ ಗೆಲ್ಲುತ್ತದೆ, ನಾವು ಇಲ್ಲಿ ಪಕ್ಷ ಗೆಲ್ಲಿಸಲೇಬೇಕು, ಆಂತರಿಕವಾಗಿ ಈಗಾಗಲೇ ನನ್ನ ಟೀಮ್ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿದ್ದು ಎರಡು ಲಕ್ಷ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

ವ್ಯಕ್ತಿ ಯಾರೇ ಇರಲಿ, ಬಿಜೆಪಿ ಪಕ್ಷ ನಮಗೆ ಮುಖ್ಯ ಎಂಬ ಮಾನಸಿಕತೆಯಲ್ಲಿ ಮತದಾರರಿದ್ದಾರೆ, ಮೋದಿಗಾಗಿ ಜನ ಮತದಾನ ಮಾಡಲು ಉತ್ಸುಕರಾಗಿದ್ದಾರೆ, ವಿಶೇಷವಾಗಿ ಯುವ ಹೊಸ ಮತದಾರರು ಬಿಜೆಪಿಗೆ ಮತದಾನ ಮಾಡಲು ಗ್ರಾಮ ಮಟ್ಟದಲ್ಲಿ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿದ್ದು ನಮಗೆ ಯಾರಿಗೂ ಗೊತ್ತಿಲ್ಲದೆ ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಪಕ್ಷದ ಮುಖಂಡರಿಗೆ ಸುರೇಶಗೌಡರು ಕರೆ ನೀಡಿದರು.
ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸ್ಫೂರ್ತಿಯ ಮಾತುಗಳನ್ನು ಹೇಳಿ ಚುನಾವಣಾ ಯುದ್ಧಕ್ಕೆ ಸನ್ನದ್ದರಾಗುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಅಧ್ಯಕ್ಷರಾದ ಹೆಬ್ಬಾಕ ರವಿ, ಹನುಮಂತರಾಜು, ಜಿಲ್ಲಾ ಸಂಚಾಲಕ ಬೈರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ರುದ್ರೇಶ, ಶ್ರೀನಿವಾಸ, ಪ್ರಭಾಕರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!