ಕೆ ಎಸ್ ಆರ್ ಟಿ ಸಿ ಬಸ್ ಗಳ ನಡುವೆ ಡಿಕ್ಕಿ

20

Get real time updates directly on you device, subscribe now.


ಕೊರಟಗೆರೆ: ಬಸ್ ಚಾಲಕನ ನಿಯಂತ್ರಣ ತಪ್ಪಿ ಗೌರಿಬಿದನೂರಿನಿಂದ ತುಮಕೂರಿಗೆ ಹೋಗಲು ಕೊರಟಗೆರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದ ಕೆ ಎಸ್ ಆರ್ ಟಿ ಸಿ ಬಸ್ ಗೆ ಪಾವಗಡಕ್ಕೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ತಿರುವಿನಲ್ಲಿ ಮಹಿಳೆಯರಿಬ್ಬರ ಅವಾಂತರದಿಂದ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾದಂತಹ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದ ಬಸ್ ನಲ್ಲಿ ಮಹಿಳೆಯರಿಬ್ಬರು ಬಸ್ ನ ಬ್ಯಾನೆಟ್ ಮೇಲೆ ಮಲಗಿದ್ದ ಮಹಿಳೆಯರನ್ನು ಎಚ್ಚರಿಸುವ ವೇಳೆ ಚಾಲಕನು ನಿಯಂತ್ರಣ ತಪ್ಪಿ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಗೌರಿಬಿದನೂರಿನಿಂದ ತುಮಕೂರಿಗೆ ಹೊರಡಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದು ಸುಮಾರು 12 ಮಂದಿಯ ಜನರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು ಮೂರು ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಬೆಂಗಳೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದ ಬಸ್ ನ ಬ್ಯಾನೆಟ್ ಮೇಲೆ ಮಹಿಳೆಯರಿಬ್ಬರು ಮಲಗಿಕೊಂಡಿದ್ದ ವೇಳೆ ಚಾಲನೆಗೆ ತೊಂದರೆಯಾಗುತ್ತದೆ, ಹಿಂದೆ ಹೋಗಿ ಎಂದು ಹೇಳುವ ಸಂದರ್ಭದಲ್ಲಿ ನಿಂತಿದ್ದ ಬಸ್ ಗೆ ಡಿಕ್ಕಿಯಾಗಿದೆ, ಕೂಡಲೇ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಚಾಲಕನು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ.

Get real time updates directly on you device, subscribe now.

Comments are closed.

error: Content is protected !!