ವಿಮಲಾ ರಣದೀವೆ ಹುಟ್ಟುಹಬ್ಬ ಆಚರಣೆ

202

Get real time updates directly on you device, subscribe now.

ಹುಳಿಯಾರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮತ್ತು ಸಿಐಟಿಯು ಸದಸ್ಯರಾದ ಪಂಚಾಯ್ತಿ ನೌಕರರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಿಐಟಿಯು ಮುಖಂಡರಾದ ಕಾಮ್ರೇಡ್ ವಿಮಲಾ ರಣದೀವೆಯವರ ಹುಟ್ಟುಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕ್ ಕಾರ್ಯದರ್ಶಿ ಎಚ್.ಎ.ಪುಷ್ಪಾ ಅವರ ಮೇಲುಸ್ತುವಾರಿಯಲ್ಲಿ ಅಂಗನವಾಡಿ ನೌಕರರಿಗೆ ಪೋಷಣ್ ಅಭಿಯಾನದ ಕೆಲಸ ಹೆಚ್ಚಾಗಿದ್ದು ನೌಕರರ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ, ಆದ ಕಾರಣ ಮನವಿ ಪತ್ರವನ್ನು ಗ್ರಾಮ ಪಂಚಾಯ್ತಿ ಮುಖಾಂತರ ಕೇಂದ್ರ ಸರ್ಕಾರಕ್ಕೆ ನೀಡಲಾಯಿತು.
ಮತಿಘಟ್ಟ ವೃತ್ತ ಮುಖಂಡರಾದ ಎಂ.ಡಿ.ಶಿವಮ್ಮ, ಸುಲೋಚನಾ, ಹೇಮಲತಾ, ಶಮಂತ, ನೇತ್ರಾ, ರಾಜಮ್ಮ, ರಕ್ಮಿಣಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!