ಶಾಂತಿಯುತ ಚುನಾವಣೆಗೆ ಅಗತ್ಯ ಕ್ರಮ

24

Get real time updates directly on you device, subscribe now.


ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ 133 ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಲೋಕಸಭಾ ಚುನಾವಣೆಯ ಸಹಾಯಕ ಚುನಾವಣಾಧಿಕಾರಿ ಗೌರವಕುಮಾರಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ್ 28ರಂದು ಅಧಿಸೂಚನೆ ಹೊರಡಲಿದ್ದು, ಏಪ್ರಿಲ್ 04 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ, ಏ.05 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 08 ಕೊನೆಯ ದಿನವಾಗಿದ್ದು, ಏಪ್ರಿಲ್ 26 ರಂದು ಮತದಾನ ನಡೆಯಲಿದೆ, ಜೂನ್ 04 ರಂದು ಫಲಿತಾಂಶ ಹೊರಬೀಳಲಿದೆ ಎಂದರು.

ತುಮಕೂರು ಗ್ರಾಮಾಂತರದ 133 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 212511 ಮತದಾರರಿದ್ದು, ಇವರಲ್ಲಿ 104514 ಪುರುಷರು, 107983 ಮಹಿಳೆಯರು ಹಾಗೂ 13 ಇತರೆ ಮತದಾರರಿದ್ದು, 223 ಮತಗಟ್ಟೆ ಸ್ಥಾಪಿಸಲಾಗಿದೆ, 212511 ಮತದಾರದಲ್ಲಿ 18-19 ವರ್ಷದ ಹೊಸ ಮತದಾರರ ಸಂಖ್ಯೆ 4505 ಇದ್ದು, ವಿಕಲಚೇತನ ಮತದಾರರು 2877 ಇದೆ, ಹಾಗೆಯೇ 85 ವರ್ಷ ಮೀರಿದ ಸುಮಾರು 2964 ಮತದಾರರು, 94 ಸೇವಾ ಮತದಾರರಿದ್ದಾರೆ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿ ಎಲ್ ಓ ಗಳ ಮೂಲಕ ಅಂಗವಿಕಲ ಮತ್ತು 85ವರ್ಷ ಮೇಲ್ಪಟ್ಟ ಮತದಾರರಿಗೆ ಫಾರಂ ನಂ. 12 ಡಿ ಕಳುಹಿಸುತ್ತಿದ್ದು, ಮನೆಯಲ್ಲಿಯೇ ಮತದಾನ ಮಾಡಲು ಇಚ್ಚಿಸುವವರು 12ಡಿ ಫಾರಂ ತುಂಬಿ ತಮ್ಮ ಆಯ್ಕೆಯನ್ನು ತಿಳಿಸಬಹುದು, ಒಮ್ಮೆ 12 ಡಿ ಆಯ್ಕೆ ಮಾಡಿದರೆ ಬದಲಾವಣೆಗೆ ಅವಕಾಶ ಇಲ್ಲ ಎಂದು ಗೌರವ ಕುಮಾರ ಶೆಟ್ಟಿ ಸ್ಪಷ್ಟಪಡಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಈಗಾಗಲೇ ಐದು ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ, ಕಸಬಾ ಪಶ್ಚಿಮದಲ್ಲಿ ಮಲ್ಲಸಂದ್ರ, ಊರ್ಡಿಗೆರೆ ಹೋಬಳಿಯಲ್ಲಿ ಚಾಸ್ ಟೋಲ್ ಕ್ಯಾತ್ಸಂದ್ರ ಮತ್ತು ಕುರುವೇಲು, ಗೂಳೂರು ಹೋಬಳಿಯಲ್ಲಿ ಹೊನ್ನುಡಿಕೆ, ಬೆಳ್ಳಾವಿ ಹೋಬಳಿಯಲ್ಲಿ ದೊಡ್ಡವೀರನಹಳ್ಳಿ ಗೇಟ್ ನಲ್ಲಿ ಚೆಕ್ ಪೋಸ್ಟ್ ಗಳನ್ನು ಪೊಲೀಸ್ ಸಹಕಾರದಲ್ಲಿ ತೆರೆಯಲಾಗಿದೆ, ಇದರ ಜೊತೆಗೆ ತಲಾ 15 ಜನರನ್ನು ಒಳಗೊಂಡ ಐದು ಪ್ಲೆಯಿಂಗ್ ಸ್ಕ್ವಾಡ್, ಎಸ್ ಎಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್ ವೀಡಿಯೋ ವಿವಿಂಗ್ ಟೀಮ್ ಹಾಗೂ ಅಕೌಂಟ್ ಟೀಮ್ ಸಹ ಕೆಲಸ ಮಾಡುತ್ತಿವೆ, ಚುನಾವಣೆಗೆ ಸಂಬಂಧಿಸಿದಂತೆ ದೂರುಗಳಿದ್ದರೆ 0816- 2006574ಗೆ ಕರೆ ಮಾಡಿ ತಿಳಿಸಬಹುದು, ಇಲ್ಲವೇ ಸಿವಿಹ್ಜಿಲ್ ಅಪ್ ಮೂಲ ಸಹ ತಿಳಿಸಬಹುದು, ದೂರು ದಾಖಲಾದ 100 ನಿಮಿಷ ಒಳಗೆ ಸಮಸ್ಯೆಗೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತುಮಕೂರು ಗ್ರಾಮಾಂತರದ ಕೆಸರುಮಡು ಗ್ರಾಮದ ಮತಗಟ್ಟೆ ಸಂಖ್ಯೆ 138,139 ಮತ್ತು 140 ನ್ನು ವಲ್ಲರಬಲ್ ಮತಗಟ್ಟೆಗಳೆಂದು ಗುರುತಿಸಿದ್ದು, ಬಾದಿತ 09 ಕುಟುಂಬಗಳ 23 ಮಂದಿ ಮತದಾರರಿದ್ದು, ಇವರಿಗೆ ಧೈರ್ಯ ತುಂಬಿ,ಭಯ ಮುಕ್ತ ವಾತಾವರಣ ನಿರ್ಮಿಸಲು ಎಲ್ಲಾ ಪ್ರಯತ್ನ ಕೈಗೊಳ್ಳುತ್ತೆವೆ.ಕ್ಷೇತ್ರದಲ್ಲಿ 107 ಕ್ರಿಟಿಕಲ್ ಮತಗಟ್ಟೆಗಳಿದ್ದು, ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಗೌರವಕುಮಾರಶೆಟ್ಟಿ ಸ್ಪಷ್ಟಪಡಿಸಿದರು.

ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತದಾನಕ್ಕೆ ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ರೈಡಮೈಸ್ ನಡೆಯಲಿದ್ದು, ತುಮಕೂರು 133 ವಿಧಾನಸಭಾ ಕ್ಷೇತ್ರದ ಮತಯಂತ್ರಗಳು ವಿಜಯನಗರದ ಸರ್ವೋದಯ ಕಾಲೇಜಿನ ಸ್ಟ್ರಾಂಗ್ ರೂಮ್ ಗೆ ಸ್ಥಳಾಂತರಗೊಳ್ಳಲಿವೆ, ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ನಂತರ ಉಳಿದ ಕೆಲಸ ಪ್ರಾರಂಭವಾಗಲಿದೆ, ಪೊಲೀಸ್ ಇಲಾಖೆ, ಆರ್ಡಿಪಿಆರ್ ಇಲಾಖೆಯ ಸಹಯೋಗದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ಕೈಗೊಂಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ತಹಶೀಲ್ದಾರ್ ಸಿದ್ದೇಶ್.ಎಂ, ಪೊಲೀಸ್ ನೋಡಲ್ ಅಧಿಕಾರಿ ಡಿವೈಎಸ್ಪಿ ಚಂದ್ರಶೇಖರ್.ಕೆ.ಆರ್ ಹಾಗೂ ತಾಪಂ ಇಓ ಇದ್ದರು.

Get real time updates directly on you device, subscribe now.

Comments are closed.

error: Content is protected !!