ಅಪಘಾತದಲ್ಲಿ ಯುವಕ ಸಾವು

233

Get real time updates directly on you device, subscribe now.

ಬರಗೂರು: ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದ ಹಾರೋಗೆರೆ ಸರ್ಕಲ್ನ ತಿರುವಿನಲ್ಲಿ ಜರುಗಿದೆ.
ಹಾರೋಗೆರೆ ಗ್ರಾಮದ ಸಿ.ಮಂಜುನಾಥ್ (35) ಖಾಸಗಿ ಬಸ್ಗೆ ಸೀಲುಕಿ ಮೃತಪಟ್ಟ ವ್ಯಕ್ತಿಯಾಗಿದ್ದು, ತನ್ನ ದಿನಸಿ ಅಂಗಡಿಗೆ ಸಾಮಾಗ್ರಿ ತರಲು ಹೀರೋ ಹೊಂಡಾ ಬೈಕ್ನಲ್ಲಿ ತೆರಳುವ ವೇಳೆ ಬರಗೂರಿನ ಹಾರೋಗೆರೆ ಸರ್ಕಲ್ನಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮಂಜುನಾಥ್ ಭುಜಕ್ಕೆ ಬೆನ್ನಿಗೆ ತಲೆಗೆ ಪೆಟ್ಟು ಬಿದ್ದ ಪರಿಣಾಮ ಆತನನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!