ಗೋದಾಮು ಮೇಲೆ ದಾಳಿ- ಕುಕ್ಕರ್ ವಶ

21

Get real time updates directly on you device, subscribe now.


ಕುಣಿಗಲ್: ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದ್ದ ಕುಕ್ಕರ್ ಇತರೆ ಸಾಮಾಗ್ರಿ ಗೋದಾಮಿನ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ 70 ಕ್ಕೂ ಹೆಚ್ಚು ಕುಕ್ಕರ್ ಬಾಕ್ಸ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ 22ನೇ ವಾರ್ಡ್ ಪ್ರದೇಶದ ಗೋದಾಮಿನಲ್ಲಿ ಕುಕ್ಕರ್ ಬಾಕ್ಸ್ ಸಂಗ್ರಹಿಸಿರುವ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರಗೆ ನೀತಿ ಸಂಹಿತೆ ಪಾಲನೆ ಅಧಿಕಾರಿ ರಾಜಶೇಖರ್ ದಾಳಿ ನಡೆಸಿ 70ಕ್ಕೂ ಹೆಚ್ಚು ಕುಕ್ಕರ್, ಇತರೆ ಪಾತ್ರೆಗಳ ಬಾಕ್ಸ್ನ್ನು ವಶಕ್ಕೆ ಪಡೆದು ನೀತಿ ಸಂಹಿತೆ ಉಲ್ಲಂಸಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.
ಸದರಿ ಕುಕ್ಕರ್ ಬಾಕ್ಸ್ ಮೇಲೆ ಸಿಎಂ, ಡಿಸಿಎಂ, ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಭಾವಚಿತ್ರ ಇವೆ, ಗೋದಾಮು ಪುರಸಭೆ ಮಾಜಿ ಅಧ್ಯಕ್ಷ ನಾಗೇಂದ್ರ ಅವರಿಗೆ ಸೇರಿದ್ದು, ಬೆಟ್ಟಸ್ವಾಮಿ ಎಂಬುವರಿಗೆ ಗುತ್ತಿಗೆ ನೀಡಿದ್ದರು ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!