ಬೈಕ್ ಮೇಲೆ ಬಿದ್ದ ಕೇಬಲ್ ವೈರ್- ನರ್ಸ್ ಸಾವು

40

Get real time updates directly on you device, subscribe now.


ಕುಣಿಗಲ್: ಬೈಕ್ ನಲ್ಲಿ ಬರುತ್ತಿದ್ದಾಗ ಕೇಬಲ್ ವೈರ್ ತುಂಡಾಗಿ ಬೈಕ್ ಸವಾರರ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಓರ್ವ ಗಾಯಗೊಂಡು ಮತ್ತೊಬ್ಬರು ಮೃತ ಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಇಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟೆ ಗ್ರಾಮದ ಲಕ್ಷ್ಮೀ ಜಾಧವ್(32) ಎಂದು ಗುರುತಿಸಲಾಗಿದೆ, ಈಕೆ ಕೆಲಸ ಮುಗಿಸಿ ಕುಣಿಗಲ್ ಪಟ್ಟಣಕ್ಕೆ ಬರಲು ಇದೆ ಮಾರ್ಗವಾಗಿ ಬರುತ್ತಿದ್ದ ಇಪ್ಪಾಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ್ ಎಂಬುವರ ಬೈಕ್ ನಲ್ಲಿ ಬರುತ್ತಿದ್ದು ತಿಪ್ಪನಾಯಕನ ಹಳ್ಳಿ ಗ್ರಾಮದ ಸಮೀಪ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ಕೇಬಲ್ ವೈರ್ ತುಂಡಾಗಿ ಬೈಕ್ ಮೇಲೆ ಬಿದ್ದ ರಭಸಕ್ಕೆ ಬೈಕ್ ಸವಾರ ಆಯತಪ್ಪಿ ಬಿದ್ದ ಪರಿಣಾಮ ನರ್ಸ್ ಸ್ಥಳದಲ್ಲೆ ಮೃತಪಟ್ಟಿದ್ದು ಮುಖ್ಯ ಶಿಕ್ಷಕ ಗಾಯಗೊಂಡಿದ್ದಾರೆ, ಘಟನೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಟೋ ಇಲ್ಲ…

Get real time updates directly on you device, subscribe now.

Comments are closed.

error: Content is protected !!