ಸಲ್ಯೂಷನ್ ಸೇವಿಸುತ್ತಿದ್ದ ಬಾಲಕ ಪುನರ್ ವಸತಿ ಕೇಂದ್ರಕ್ಕೆ

410

Get real time updates directly on you device, subscribe now.

ಕುಣಿಗಲ್: ಪಟ್ಟಣದಲ್ಲಿ ಅಲೆಮಾರಿಗಳಂತೆ ಸಲ್ಯೂಷನ್ ಮತ್ತಿಗೆ ಒಳಗಾಗಿ ಸುತ್ತಾಡುತ್ತಿದ್ದ ಮಕ್ಕಳ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಬ್ಬ ಬಾಲಕನನ್ನು ವಶಕ್ಕೆ ಪಡೆದು ಆತನಿಗೆ ಪುನರ್ ವಸತಿ ಕೇಂದ್ರಕ್ಕೆ ಕಳಿಸಿದ್ದಾರೆ.
ಪಟ್ಟಣದ ಉಪ್ಪಾರ ಬಡಾವಣೆ ಸಮೀಪದ ವಿಠಲ ದೇವಾಲಯದ ಬಳಿ ಮೊಕ್ಕಾಂ ಮಾಡಿರುವ ಅಲೆಮಾರಿ ಕುಟುಂಬಗಳ ಸುಮಾರು ಆರಕ್ಕೂ ಹೆಚ್ಚು ಮಕ್ಕಳು ಚಿಂದಿ ಅಯುತ್ತಾ, ಎರೆಸರ್ ಲೋಷನ್ ಹೀರುತ್ತಾ ಸದಾ ಮತ್ತಿನ ಲೋಕದಲ್ಲೆ ತೇಲುತ್ತಿದ್ದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದರು. ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ಸಾರ್ವಜನಿಕರು ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಸೋಮವಾರ ರಾಮ್ ಎಂಬುವವರು ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಪಟ್ಟಣದಲ್ಲಿ ಇಲಾಖೆಯ ಸೂಪರ್ವೈಸರ್ ಶೋಭಾ ಸೇರಿದಂತೆ ಇತರರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಏಳು ವರ್ಷದ ಬಾಲಕನ ರಕ್ಷಣೆ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಿ ಆತನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!